ಹಿರೇಕೆರೂರ: ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ವಿಜಯ ಸಾಧಿಸುತ್ತಿದ್ದಂತೆ ಪಟ್ಟಣದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಚಳಗೇರಿ, ಪ್ರ.ಕಾ. ಉಮೇಶ ಬಣಕಾರ, ಸಣ್ಣಗೌಡ ಪಾಟೀಲ, ಶಂಭು ಕರ್ಜಗಿ, ಗಂಗಾಧರ ಮಾಗನೂರ, ರಾಮು ಮುರಡೇಶ್ವರ, ನಾರಾಯಣ ಬೆಳ್ಳೂರ, ಉಳವಿಗೌಡ ವೀರನಗೌಡ್ರ ಮೊದಲಾದವರು ಹಾಜರಿದ್ದರು.