ಚಾಮರಾಜನಗರ: ನಗರದ ಸಿ.ಆರ್. ಬಾಲರ ಪಟ್ಟಣ ಶಾಲೆಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ (ಪ್ರೌಢಶಾಲಾ ವಿಭಾಗ)ಯಲ್ಲಿ ಪ್ರಥಮ ಸ್ಥಾನ ಪಡೆದಿರುವ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜ. 6ರಿಂದ 8ರವರೆಗೆ ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ನಡೆಯಲಿದೆ. ಆಯ್ಕೆಯಾಗಿರುವ ವಿದ್ಯಾರ್ಥಿಗಳು ತಪ್ಪದೆ ಸ್ಪರ್ಧೆಯಲ್ಲಿ ಭಾಗವಹಿಸ ಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬೆಳ್ಳಶೆಟ್ಟಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ನೋಡೆಲ್ ಅಧಿಕಾರಿ ಜಿ. ತಮ್ಮಯ್ಯ ಅಥವಾ ಮೊಬೈಲ್ 94802 00897 ಸಂಪರ್ಕಿಸಬಹುದು. ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು(ಕ್ರಮವಾಗಿ ಸ್ಪರ್ಧೆ, ಹೆಸರು ಮತ್ತು ಶಾಲೆ).
ಕನ್ನಡ ಭಾಷಣ: ಡಿ. ರೋಜಾ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ರಾಮಾಪುರ, ಹನೂರು ವಲಯ.
ಇಂಗ್ಲಿಷ್ ಭಾಷಣ: ಕೆ.ಆರ್. ಕಾವ್ಯಾ, ಸರ್ಕಾರಿ ಪ್ರೌಢಶಾಲೆ, ಕೆಸ್ತೂರು, ಯಳಂದೂರು ತಾ.
ಹಿಂದಿ ಭಾಷಣ: ವಿ. ಐಶ್ವರ್ಯ, ಎಸ್ಡಿಎ ಪ್ರೌಢಶಾಲೆ, ಕೊಳ್ಳೇಗಾಲ.
ಉರ್ದು ಭಾಷಣ: ಸಮೀನಾ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಗುಂಡ್ಲುಪೇಟೆ.
ತಮಿಳು ಭಾಷಣ: ಆರ್. ರಾಘವಿ, ಗೌತಮ ಪ್ರೌಢಶಾಲೆ, ಬೊಮ್ಮಲಾಪುರ, ಗುಂಡ್ಲುಪೇಟೆ ತಾ.
ತೆಲುಗು ಭಾಷಣ: ಶಿಲ್ಪಶ್ರೀ, ಜೆಇಎಸ್ ಪ್ರೌಢಶಾಲೆ, ಗುಂಡ್ಲುಪೇಟೆ.
ಮರಾಠಿ ಭಾಷಣ: ವಿನುತಬಾಯಿ, ಎಸ್ವಿಕೆ ಸಪಪೂ ಕಾಲೇಜು, ಕೊಳ್ಳೇಗಾಲ.
ಧಾರ್ಮಿಕ ಪಠಣ-ಸಂಸ್ಕೃತ: ಎಲ್. ವಿಜಯಸಿಂಹ, ಸೇವಾಭಾರತಿ, ಚಾಮರಾಜನಗರ.
ಧಾರ್ಮಿಕ ಪಠಣ-ಅರೇಬಿಕ್: ಸೂಹೇಲ್ ಪಾಷಾ, ಎಂವೈಎಫ್ ಪ್ರೌಢಶಾಲೆ, ಚಾಮರಾಜನಗರ.
ಯೋಗಾಸನ: ಮಧುಸೂದನ್, ಸರ್ಕಾರಿ ಪ್ರೌಢಶಾಲೆ, ಸಿಂಗಾನಲ್ಲೂರು, ಕೊಳ್ಳೇಗಾಲ ತಾ.
ಕರ್ನಾಟಕ ಶಾಸ್ತ್ರೀಯ ಸಂಗೀತ: ಎ. ಫಣಿಸಿಂಹ, ವಿಎಚ್ಪಿ ಆಂಗ್ಲಮಾಧ್ಯಮ ಪ್ರೌಢಶಾಲೆ, ಚಾಮರಾಜನಗರ.
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ: ಆರ್. ಚೈತ್ರಾ, ಸಪಪೂ ಕಾಲೇಜು, ತೆರಕಣಾಂಬಿ, ಗುಂಡ್ಲುಪೇಟೆ ತಾ.
ಜಾನಪದ ಗೀತೆ: ಲಿಲ್ಲಿಪುಷ್ಪ, ಕ್ರಿಸ್ತರಾಜ ಪ್ರೌಢಶಾಲೆ, ಹನೂರು.
ಭಾವಗೀತೆ: ಎಸ್. ಸುಷ್ಮಾ, ವಾಸವಿ ವಿದ್ಯಾಲಯ, ಕೊಳ್ಳೇಗಾಲ.
ಭರತನಾಟ್ಯ: ನಿಸರ್ಗರಾಜ್, ಎಸ್ಡಿವಿಎಸ್ ಪ್ರೌಢಶಾಲೆ, ಯಳಂದೂರು.
ಛದ್ಮವೇಷ: ಎಸ್. ಶೇಖರ್, ಸರ್ಕಾರಿ ಪ್ರೌಢಶಾಲೆ, ಬೈರನತ್ತ, ಹನೂರು ವಲಯ.
ಕ್ಲೇ ಮಾಡಲಿಂಗ್: ಎಸ್. ರಂಗಸ್ವಾಮಿ, ಸರ್ಕಾರಿ ಪ್ರೌಢಶಾಲೆ, ಕೆಸ್ತೂರು, ಯಳಂದೂರು ತಾ.
ಆಶುಭಾಷಣ: ವಿ. ದೀಪಿಕಾ, ಪೆಟ್ಸ್ ಪ್ರೌಢಶಾಲೆ, ಅಗರ, ಯಳಂದೂರು ತಾ.
ಮಿಮಿಕ್ರಿ: ಈ. ಕಾರ್ತಿಕ್, ಕ್ರಿಸ್ತರಾಜ ಪ್ರೌಢಶಾಲೆ, ಹನೂರು.
ಪ್ರಬಂಧ ರಚನೆ: ಎಲ್. ಇಂದು, ಎಸ್ವಿಕೆ ಸಪಪೂ ಕಾಲೇಜು, ಕೊಳ್ಳೇಗಾಲ.
ಚರ್ಚಾ ಸ್ಪರ್ಧೆ: ಕೆ.ಎಸ್. ಮಂಜುನಾಥ, ಸರ್ಕಾರಿ ಪ್ರೌಢಶಾಲೆ, ತೆರಕಣಾಂಬಿ, ಗುಂಡ್ಲುಪೇಟೆ ತಾ.
ಚಿತ್ರಕಲೆ: ಜಿ. ಕಾರ್ತಿಕ್, ಸರ್ಕಾರಿ ಪ್ರೌಢಶಾಲೆ, ಕೆಂಪಯ್ಯನಹಟ್ಟಿ, ಹನೂರು ವಲಯ.
ರಂಗೋಲಿ: ವೈ.ಆರ್. ನವ್ಯಾ, ಎಸ್ಡಿಇಎಸ್ ಪ್ರೌಢಶಾಲೆ, ಯಳಂದೂರು.
ಗಝಲ್: ಚಂದನ್ ಎಂ. ಮೇಘಾವತ್, ಸೇಂಟ್ ಜೋಸೆಫ್ ಪ್ರೌಢಶಾಲೆ, ಚಾಮರಾಜನಗರ.
ನಾಟಕ: ಎನ್. ಶಿವಪ್ರಸಾದ್, ಎಂ. ಸಿದ್ದೇಶ್, ಬಿ. ಅಭಿಷೇಕ್, ಎಸ್. ಚಂದನ್, ಸಿ. ನೀಲಾ, ಎಂ. ಮೇಘಾ, ಎ. ವನಿತಾ, ಎಂ. ವಿಜಯಲಕ್ಷ್ಮೀ, ಸರ್ಕಾರಿ ಪ್ರೌಢಶಾಲೆ, ಭೈರನತ್ತ, ಹನೂರು ವಲಯ.
ರಸಪ್ರಶ್ನೆ: ಪ್ರತಿಮಾ, ನವೀನ್ಕುಮಾರ್, ಮನುಕುಮಾರ್, ವಿ. ಸ್ಫೂರ್ತಿ, ಸರ್ಕಾರಿ ಪ್ರೌಢಶಾಲೆ, ಸತ್ತೇಗಾಲ, ಕೊಳ್ಳೇಗಾಲ ತಾ.
ಕವ್ವಾಲಿ: ಉಮ್ಮೇಹಾನಿ, ಸೋಹತ್ ಪಾಷಾ, ತಸ್ಮಿಯಾಬಾನು, ಸಫಿಯ ತರಣುಂ, ಎಂವೈಎಫ್ ಪ್ರೌಢಶಾಲೆ, ಚಾಮರಾಜನಗರ.
ಜಾನಪದ ನೃತ್ಯ: ಅರುಣ್ಕುಮಾರ್, ಚಂದ್ರು, ರವಿಕುಮಾರ್, ಮಹೇಶ್ಕುಮಾರ್, ರೋಷನ್, ಮಧು, ಭೀಮರಾವ್ ರಾಮ್ಜೀ ಪ್ರೌಢಶಾಲೆ, ಹೊನ್ನೂರು.
ಕೋಲಾಟ: ಅಶ್ವಿನಿ, ಶುಭಶ್ರೀ, ಪೈನಾ ಕುಮಾರಿ, ಎಸ್. ಶ್ರಾವ್ಯ, ಎಸ್. ಭಾವನಾ, ಬಿ. ಕವಿತಾ, ಲಯನ್ಸ್ ಪ್ರೌಢಶಾಲೆ, ಯಳಂದೂರು.
ಸ್ಥಳದಲ್ಲೇ ವಿಜ್ಞಾನ ಮಾದರಿ ತಯಾರಿಕೆ: ಎನ್. ಕೃತಿಕಾ, ಕಿಶೋರ್, ಲಯನ್ಸ್ ಪ್ರೌಢಶಾಲೆ, ಕೊಳ್ಳೇಗಾಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.