ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀಪ್‌–ಶಾಲಾ ಬಸ್‌ ಡಿಕ್ಕಿ 3 ಸಾವು

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನ ಪೋತ್ನಾಳ ಹಳ್ಳದ ಬಳಿ ಇರುವ ಡಾಬಾ ಹತ್ತಿರ ರಾಯಚೂರು -ಗಂಗಾವತಿ ಮುಖ್ಯ­ರಸ್ತೆಯಲ್ಲಿ ಬುಧವಾರ ಸಂಜೆ ಬೊಲೆರೊ ಜೀಪ್‌ ಹಾಗೂ  ಶಾಲಾ ಬಸ್ ನಡುವೆ ನಡೆದ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲಿ ಮೃತಪಟ್ಟು, ನಾಲ್ವರು ಗಾಯ­ಗೊಂಡಿದ್ದಾರೆ.

ಜೀಪ್‌ ಚಾಲಕ ಗಂಗನಗೌಡ (35), ಸಿರಾಜ್ (45), ಬಾಷಾಸಾಬ ದೊಡ್ಡಮನಿ (60) ಮೃತಪಟ್ಟವರು. ರಸೂಲ್ ಸಾಬ, ಬಸವರಾಜ ಸಾಳೇರ್, ಬಾಬುಸಾಬ, ಬಸವರಾಜ ಬಡಿಗೇರ ಗಾಯಗೊಂಡಿದ್ದಾರೆ. ಇವರೆಲ್ಲರೂ ದೇವದುರ್ಗ ತಾಲ್ಲೂಕಿನ ರಾಮದುರ್ಗ­ದವರು. ಶಾಲಾ ಬಸ್‌ನಲ್ಲಿದ್ದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಂಗನಗೌಡರ ಎತ್ತುಗಳನ್ನು ಸಿಂಧ­ನೂರು ತಾಲ್ಲೂಕಿನ ಗೊರೇಬಾಳ ಕ್ಯಾಂಪಿಗೆ ಗಣಪತಿ ಮೆರವಣಿಗೆಗೆಂದು ಕರೆ­ತರಲಾಗಿತ್ತು. ತಮ್ಮ ಎತ್ತುಗಳನ್ನು ನೋಡುವ ಉದ್ದೇಶದಿಂದ ಗಂಗನಗೌಡ ಗ್ರಾಮದ ಆರು ಜನರನ್ನು ತನ್ನೊಂದಿಗೆ ಕರೆದುಕೊಂಡು ಗೊರೇಬಾಳ ಕ್ಯಾಂಪಿಗೆ ಬಂದ್ದಿದ್ದರು. ಮೆರವಣಿಗೆ ಮುಗಿಸಿ­ಕೊಂಡು ವಾಪಸ್ ತೆರಳುವ ಸಮಯ­ದಲ್ಲಿ ಅಪಘಾತ ನಡೆದಿದೆ ಎಂದು ಬಳಗಾನೂರು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT