ನಗರದ ನೀರಿನ ಕೊರತೆಯನ್ನು ಟ್ಯಾಂಕರ್ಗಳು ನೀಗುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನೀರಿನ ವ್ಯಾಪಾರ ಇತ್ತೀಚಿನ ತಿಂಗಳಲ್ಲಿ ಹೆಚ್ಚಾಗುತ್ತಿದೆ. ಆದರೆ ಈ ವ್ಯಾಪಾರ ಜನಸಾಮಾನ್ಯರ ಜೀವಕ್ಕೂ ಕುತ್ತು ತರುತ್ತಿರುವುದು ಆಘಾತಕಾರಿ.
ಕಳೆದ ತಿಂಗಳು ಮಾರ್ಚ್ನಲ್ಲಿ ಹತ್ತು ಮಂದಿ ಈ ಏಪ್ರಿಲ್ ಮೊದಲ ವಾರದಲ್ಲಿ ಇಬ್ಬರು ಖಾಸಗಿ ನೀರಿನ ಟ್ಯಾಂಕರ್ ವಾಹನಗಳಿಗೆ ಬಲಿಯಾಗಿರುವುದು ಇದಕ್ಕೆ ಸಾಕ್ಷಿ. ಅತಿವೇಗ, ನಿರ್ಲಕ್ಷ್ಯ ಸೂಕ್ತ ಚಾಲನಾ ತರಬೇತಿ ಇಲ್ಲದಿರುವುದು, ಹೆಚ್ಚು ಟ್ರಿಪ್ ಮಾಡುವ ಒತ್ತಡ, ಪ್ರತಿ ಟ್ರಿಪ್ಗೆ ಸಿಗುವ ಬೋನಸ್ನ ಆಮಿಷದಿಂದಾಗಿ ಅಪಘಾತಗಳು ಸಂಭವಿಸುತ್ತಿವೆ.
ಆದರೆ ಮೃತರ/ ಗಾಯಾಳುಗಳ ಹಿತದೃಷ್ಟಿಯಿಂದ ಖಾಸಗಿ ನೀರಿನ ಟ್ಯಾಂಕರ್ಗಳ ಮಾಲೀಕರಿಗೆ, ಚಾಲಕರಿಗೆ ಕಾನೂನಿನ ಬಿಸಿ ಮುಟ್ಟಬೇಕಲ್ಲವೇ?