ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವವೈವಿಧ್ಯ ಮೇಲಿನ ವೆಚ್ಚವೂ ಬಂಡವಾಳವೆ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಜೀವ-ವೈವಿಧ್ಯದ ಸಂರಕ್ಷಣೆಗಾಗಿ ಮಾಡುವ ವೆಚ್ಚವನ್ನು ಭವಿಷ್ಯದ ಬಂಡವಾಳ ಹೂಡಿಕೆ ಎಂದೇ ಪರಿಗಣಿಸಬೇಕು ಎಂದು ಪರಿಸರ ಸಚಿವೆ ಜಯಂತಿ ನಟರಾಜನ್ ಅಭಿಪ್ರಾಯ ಪಟ್ಟಿದ್ದಾರೆ.

 ಜಗತ್ತಿನಾದ್ಯಂತ ಇರುವ ಆರ್ಥಿಕ ಬಿಕ್ಕಟ್ಟಿನ ಸ್ಥಿತಿಯ ನಡುವೆಯೂ ರಾಷ್ಟ್ರಗಳು ಈ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಲು ಹಿಂಜರಿಯಬಾರದು ಎಂದೂ ಅವರು ಹೇಳಿದ್ದಾರೆ.

ಜೀವ ವೈವಿಧ್ಯ ಸಮ್ಮೇಳನ (ಸಿಬಿಡಿ) ಕುರಿತ  ಕಾನ್ಫರೆನ್ಸ್ ಆಫ್ ಪಾರ್ಟಿಸ್‌ನ 11ನೇ ಸಭೆಯ (ಸಿಒಪಿ-11) ಉದ್ಘಾಟನಾ ಸಮಾರಂಭದಲ್ಲಿ ಜಯಂತಿ ನಟರಾಜನ್ ಮಾತನಾಡಿದರು.

ಸೋಮವಾರ ಆರಂಭಗೊಂಡಿರುವ ಸಿಒಪಿ-11ಸಭೆಯು, ಜೀವ ವೈವಿಧ್ಯ ಶಿಷ್ಟಾಚಾರ ಜಾರಿಗೊಳಿಸಲು ನಿಧಿ ಸಂಗ್ರಹ ವಿಧಾನ ಮತ್ತು ಜೀವ ವೈವಿಧ್ಯ ಸಂಪನ್ಮೂಲಗಳ ಲಭ್ಯತೆ ಮತ್ತು ಅವುಗಳ ಹಂಚಿಕೆಯಿಂದ ಆಗುವ ಲಾಭ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದೆ.

`ಈಗ ಜೀವ ವೈವಿಧ್ಯ ಸಂರಕ್ಷಿಸುವುದಕ್ಕಾಗಿ ಮಾಡುವ ವೆಚ್ಚವನ್ನು ನಮಗೆ ಮತ್ತು ನಮ್ಮ ಮುಂದಿನ ಜನಾಂಗಕ್ಕಾಗಿ ಹೂಡುವ ಬಂಡವಾಳ ಎಂದು ಪರಿಗಣಿಸಬೇಕು~ ಎಂದು ಸಚಿವರು ಹೇಳಿದ್ದಾರೆ.
ಸಿಒಪಿ-11 ಸಭೆಯಲ್ಲಿ 160 ರಾಷ್ಟ್ರಗಳು ಭಾಗವಹಿಸುವ ನಿರೀಕ್ಷೆ ಇದೆ.

`ಆರ್ಥಿಕ ಹಿಂಜರಿತವು ನಮ್ಮನ್ನು ಧೃತಿಗೆಡಿಸಬಾರದು. ಬದಲಾಗಿ ಈ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚು ಬಂಡವಾಳ ಹೂಡಲು  ಪ್ರೇರೇಪಿಸಬೇಕು~ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT