ಬೆಂಗಳೂರು: ಜೆಡಿಎಸ್ ರಾಜ್ಯ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕ ಕುರಿತು ಬುಧವಾರ ನಡೆಯುವ ಪಕ್ಷದ ಪ್ರಮುಖರ ಸಭೆಯಲ್ಲಿ ಅಂತಿಮ ತೀರ್ಮಾನ ಆಗುವ ಸಾಧ್ಯತೆ ಇದೆ.
ಪ್ರಮುಖ ತೀಮಾರ್ನಗಳನ್ನು ತೆಗೆದುಕೊಳ್ಳಲು ಕೋರ್ ಕಮಿಟಿ (ಪ್ರಮುಖರ ಸಮಿತಿ) ಅಗತ್ಯ ಇದ್ದು, ಅದರ ರಚನೆಗೂ ಈ ಸಭೆಯಲ್ಲಿ ನಿರ್ಧಾರ ಆಗಲಿದೆ ಎಂದು ಮೂಲಗಳು ತಿಳಿಸಿವೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಕೋರ್ ಕಮಿಟಿ ರಚನೆಯಾಗಲಿದೆ. ಬುಧವಾರವೇ ಹೊಸ ಅಧ್ಯಕ್ಷರ ನೇಮಕ ಆಗಬಹುದು ಎನ್ನಲಾಗಿದೆ.
ಕೋರ್ ಕಮಿಟಿ ರಚನೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಅವರು 50 ಜನ ಪ್ರಮುಖರ ಪಟಿ್ಟಯೊಂದನ್ನು ನೀಡಿದ್ದಾರೆ. ಅದರಲ್ಲಿ ಎಲ್ಲ ಜಾತಿ, ಪ್ರದೇಶ ವಾರು ಮುಖಂಡರ ಹೆಸರಿದೆ. ಆ ಪಟಿ್ಟಯನ್ನು ಪರಿಶೀಲಿಸಿದ ನಂತರ 15ಕ್ಕೆ ಸೀಮಿತಗೊಳಿಸಿ ಕೋರ್ ಕಮಿಟಿ ರಚಿಸಲಾಗುತ್ತದೆ. ಕಮಿಟಿ ಸಭೆಯಲ್ಲೇ ಅಧ್ಯಕ್ಷರ ಆಯೆ್ಕಯಾಗಬಹುದು. ಇಲ್ಲವೇ ಅಧ್ಯಕ್ಷರ ಆಯೆ್ಕ ಅಧಿಕಾರವನ್ನು ದೇವೇಗೌಡರಿಗೆ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಮಾಜಿ ಸಚಿವರಾದ ಬಸನಗೌಡ ಪಾಟೀಲ ಯತ್ನಾಳ, ಎ.ಕೃಷ್ಣಪ್ಪ, ಪಿ.ಜಿ.ಆರ್.ಸಿಂಧ್ಯ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಮುಂಬರುವ ಲೋಕ
ಸಭಾ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಗೆಲ್ಲುವ ಉದ್ದೇಶವನ್ನು ಜೆಡಿಎಸ್ ಹೊಂದಿದ್ದು, ಕೋರ್ ಕಮಿಟಿ ಮುಖಂಡರಿಗೆ ತಲಾ ಒಂದು ಲೋಕಸಭಾ ಕ್ಷೇತ್ರಗಳ ಉಸು್ತವಾರಿ ನೀಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷ ಸಂಘಟನೆ ಉದ್ದೇಶದಿಂದ ದೇವೇ ಗೌಡ ಅವರು ಮಂಗಳವಾರ ಅಲ್ಪ ಸಂಖ್ಯಾತ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.