ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಪಿಸಿ ವರದಿ ಅಂಗೀಕರಿಸಿದ ಲೋಕಸಭೆ

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವದೆಹಲಿ (ಐಎಎನ್‌ಎಸ್‌): 2ಜಿ ತರಂಗಗುಚ್ಚ  ಹಗರಣಕ್ಕೆ ಸಂಬಂಧಿಸಿ­ದಂತೆ ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ) ಸಲ್ಲಿಸಿದ ವರದಿಯನ್ನು ಲೋಕಸಭೆ ಸೋಮವಾರ ಧ್ವನಿಮತದಿಂದ ಅಂಗೀಕರಿಸಿದೆ.

ಪ್ರಧಾನಿ ಮನಮೋಹನ್‌ ಸಿಂಗ್‌ ಹಾಗೂ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಈ ವರದಿ­ಯಲ್ಲಿ ದೋಷಮುಕ್ತಗೊಳಿಸ­ಲಾ­ಗಿದ್ದರೆ, ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗಿದೆ.ವರದಿಗೆ ವಿರೋಧ ವ್ಯಕ್ತಪಡಿಸಿದ ರಾಜಾ ಅವರ ಪಕ್ಷ ಡಿಎಂಕೆ ಸಭಾತ್ಯಾಗ ಮಾಡಿತು.

ಸ್ಪೀಕರ್‌ ಮೀರಾ ಕುಮಾರ್‌ ಸದನದ ಸಮ್ಮತಿಗಾಗಿ ಪಿ.ಸಿ. ಚಾಕೊ ನೇತೃತ್ವದ ವರದಿಯನ್ನು ಮಂಡಿಸಿದ ನಂತರ ಅದನ್ನು ಧ್ವನಿಮತದಿಂದ ಅಂಗೀಕರಿಸ­ಲಾ­ಯಿತು.

ವರದಿಯ ಕುರಿತು ಚರ್ಚೆಗೆ ಕೋರಿ ಬಿಜೆಪಿ ನಾಯಕ ಯಶವಂತ್‌ ಸಿನ್ಹಾ ಹಾಗೂ ಸಿಪಿಎಂ ನಾಯಕ ಬಸುದೇವ ಅಚಾರ್ಯ ಅವರು ಕಳುಹಿಸಿದ್ದ ಮನ­ವಿ­ಗಳನ್ನು ಸ್ಪೀಕರ್‌ ತಿರಸ್ಕರಿಸಿದರು.

2ಜಿ ತರಂಗಗುಚ್ಚಗಳ ಹಂಚಿಕೆ­ಯಲ್ಲಿ ಅಕ್ರಮ ನಡೆದಿದ್ದು ಇದರಿಂದ ಸರ್ಕಾ­ರದ ಬೊಕ್ಕಸಕ್ಕೆ ₨ 1.76 ಲಕ್ಷ ಕೋಟಿ ನಷ್ಟವುಂಟಾಗಿದೆ ಎಂದು ಮಹಾ­ಲೇಖ­ಪಾಲರು ನೀಡಿರುವ ವರ­ದಿಗೆ ಸಮಿ­ತಿಯ ಬಹುತೇಕ ಸದಸ್ಯರು ಸಮ್ಮತಿ ಸೂಚಿಸಿಲ್ಲ.  ಹಿಂದಿನ ಎನ್‌ಡಿಎ ಸರ್ಕಾರದ ಅವಧಿಯ (1998–2004) ತಪ್ಪು ದೂರ­ಸಂಪರ್ಕ ನೀತಿ­ಯಿಂದಾಗಿ  ಸರ್ಕಾ­ರದ ಬೊಕ್ಕಸಕ್ಕೆ ₨ 40,000 ಕೋಟಿ ನಷ್ಟವುಂಟಾಗಿದೆ ಎಂದೂ ಸಮಿತಿ ದೂರಿದೆ.

19 ತಿಂಗಳ ವಿಚಾರಣೆಯ ನಂತರ ಚಾಕೊ ತಮ್ಮ ವರದಿಯನ್ನು ಅ.29­ರಂದು ಸ್ಪೀಕರ್‌ ಅವರಿಗೆ ಸಲ್ಲಿಸಿ­ದ್ದರು. ಪಕ್ಷಪಾತದಿಂದ ಕೂಡಿರುವ ಈ ವರದಿ­ಯನ್ನು ಹಿಂತಿರುಗಿಸಬೇಕು ಎಂದು  ಮಾಜಿ ಸಚಿವ ಎ. ರಾಜಾ ಅವರು ಲೋಕಸಭೆ ಸ್ಪೀಕರ್‌ ಅವರನ್ನು ಒತ್ತಾಯಿ­ಸಿದ್ದರು.

ಪ್ರಧಾನಿ ಹಾಗೂ ಹಣಕಾಸು ಸಚಿವ­ರನ್ನು ತಪ್ಪಿತಸ್ಥರ ಪಟ್ಟಿಯಿಂದ ಕೈಬಿ­ಡುವ ನಿರ್ಧಾರ ಪ್ರತಿಭಟಿಸಿ ಸಮಿತಿ­-ಯಲ್ಲಿದ್ದ ಬಿಜೆಪಿ ಸದಸ್ಯರು ಈ ಸಂಬಂ­ಧದ ಹಲವು ಸಭೆಗಳನ್ನು ಬಹಿಷ್ಕರಿ­ಸಿದ್ದರು.ಆದರೆ ನಂತರ ಈ ಸದಸ್ಯರು ಸಮಿತಿಯ ಸಭೆಗಳಿಗೆ ಹಾಜರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT