`ನಾನು ವಾಜಪೇಯಿ ಸರ್ಕಾರದಲ್ಲಿ ಹಣಕಾಸು ಸಚಿವನಾಗಿದ್ದೆ ಎಂಬ ಕಾರಣಕ್ಕೆ ಈ ಹೇಳಿಕೆ ನೀಡುತ್ತಿಲ್ಲ. ಆದರೆ ಇಂತಹ ಅಸಂಬದ್ಧ ದಾಖಲೆ ಬಿಡುಗಡೆ ಮಾಡುವ ಅಗತ್ಯವಿರಲಿಲ್ಲ' ಎಂದು ಜೆಪಿಸಿ ಸದಸ್ಯರೂ ಆಗಿರುವ ಜಸ್ವಂತ್ ಸಿಂಗ್ ಸೋಮವಾರ ಸಂಸತ್ತಿನ ಹೊರಗಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
`ಎನ್ಡಿಎ ಸರ್ಕಾರ ಅಂದಿನ ದೂರಸಂಪರ್ಕ ಸಚಿವ ಜಗಮೋಹನ್ ಮತ್ತು ಹಣಕಾಸು ಸಚಿವ ಯಶವಂತ ಸಿನ್ಹಾ ಅವರ ವಿರೋಧದ ನಡುವೆಯೂ ಟೆಲಿಕಾಂ ಕಂಪೆನಿಗಳಿಗೆ ರಿಯಾಯಿತಿ ಅನುದಾನ ನೀಡಿದ್ದೇಕೆ?' ಎಂಬ ಸುದ್ದಿಗಾರರ ಪ್ರಶ್ನೆಗೆ ಜಸ್ವಂತ್ ಸಿಂಗ್, `ಇದೊಂದು ಗೊಂದಲದ ಪ್ರಶ್ನೆಯಾಗಿದೆ' ಎಂದು ಹಾರಿಕೆ ಉತ್ತರ ನೀಡಿದರು.
2ಜಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜೆಪಿಸಿ ಎನ್ಡಿಎ ಸರ್ಕಾರದ ಅವಧಿಯಲ್ಲಿ ಟೆಲಿಕಾಂ ಕಂಪೆನಿಗಳಿಗೆ ರಿಯಾಯಿತಿ ಅನುದಾನ ನೀಡಿರುವುದನ್ನು ಪ್ರಶ್ನಿಸಿತ್ತು.