ನವದೆಹಲಿ: 2ಜಿ ಹಗರಣ ಕುರಿತು ವಿಚಾರಣೆ ನಡೆಸಲು ರಚಿಸಲಾಗಿರುವ ಸಂಸತ್ತಿನ ಜಂಟಿ ಸದನ ಸಮಿತಿಗೆ ಲೋಕಸಭೆಯ 20 ಸದಸ್ಯರನ್ನು ನೇಮಿಸಲಾಗಿದೆ. ಪ್ರಣವ್ ಮುಖರ್ಜಿ ಸದಸ್ಯರ ಹೆಸರನ್ನು ಸದನದಲ್ಲಿ ಪ್ರಕಟಿಸಿದರು.
ವಿ. ಕಿಶೋರ್ಚಂದ್ರ ಎಸ್. ದೇವ್, ಪವನ್ಸಿಂಗ್ ಘಟೋವರ್, ಜೈ ಪ್ರಕಾಶ್ ಅಗರವಾಲ್, ದೀಪೇಂದರ್ಸಿಂಗ್ ಹೂಡಾ. ಪಿ.ಸಿ.ಚಾಕೋ, ಮನಿಷ್ ತಿವಾರಿ, ನಿರ್ಮಲ್ ಖತ್ರಿ, ಅಧೀರ್ ರಂಜನ್ ಚೌಧುರಿ, ಟಿ.ಆರ್.ಬಾಲು, ಕಲ್ಯಾಣ್ ಬ್ಯಾನರ್ಜಿ, ಜಸ್ವಂತ್ಸಿಂಗ್, ಯಶವಂತ್ ಸಿನ್ಹ, ಹರಿನ್ ಪಾಠಕ್, ಗೋಪಿನಾಥ್ ಮುಂಡೆ, ಶರದ್ ಯಾದವ್, ದಾರಾಸಿಂಗ್ ಚೌಹಾಣ್, ಅಖಿಲೇಶ್ ಯಾದವ್, ಗುರುದಾಸ್ದಾಸ್ ಗುಪ್ತಾ, ಅರ್ಜುನ್ ಚರಣ್ ಸೇಠಿ ಮತ್ತು ಡಾ.ಎಂ. ತಂಬಿ ದುರೈ.
ಸ್ಪೀಕರ್ ಇವರಲ್ಲಿ ಒಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸುವರು. ರಾಜ್ಯಸಭೆ ಹತ್ತು ಸದಸ್ಯರು ಸಮಿತಿಗೆ ನೇಮಕವಾಗಬೇಕಿದೆ. ಮುಂಗಾರು ಅಧಿವೇಶನದ ಅಂತ್ಯಕ್ಕೆ ಸಮಿತಿ ವರದಿ ಸಲ್ಲಿಸಲಿದೆ.