ಕಾನ್ಪುರ/ ಲಖನೌ (ಪಿಟಿಐ): 2ಜಿ ತರಂಗಾಂತರ ಪವಾನಗಿ ಹಂಚಿಕೆ ಹಗರಣವನ್ನು ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ತನಿಖೆಗೆ ಒಪ್ಪಿಸದಿದ್ದರೆ ಸಂಸತ್ತಿನ ಬಜೆಟ್ ಅಧಿವೇಶನವನ್ನು ನಡೆಯಲು ಬಿಡುವುದಿಲ್ಲ ಎಂದು ಬಿಜೆಪಿ ಬೆದರಿಕೆ ಹಾಕಿದೆ.
ಮಂಗಳವಾರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಬಗ್ಗೆ ವಿರೋಧ ಪಕ್ಷಗಳ ಜತೆ ಮಾತುಕತೆ ನಡೆಸಲಿರುವುದರಿಂದ ಬಿಜೆಪಿಯ ಬೆದರಿಕೆಗೆ ಹೆಚ್ಚಿನ ಮಹತ್ವ ಬಂದಿದೆ.