ಮೂಡುಬಿದಿರೆ ಸಿದ್ಧಾಂತ ಮಂದಿರದಲ್ಲಿ ಪ್ರಾಚೀನ ಜಿನಬಿಂಬಗಳನ್ನು ಕಳ್ಳತನ ಮಾಡಿದ ಪ್ರಕರಣ ವರದಿಯಾಗಿದೆ. ಸ್ಥಳೀಯ ಶ್ರೀ ಜೈನಮಠದ ಆಡಳಿತಕ್ಕೊಳಪಟ್ಟ 18 ಜೈನಮಂದಿರಗಳ ರಕ್ಷಣೆಗೆ ಪೊಲೀಸ್ ಇಲಾಖೆಯಿಂದಲೂ ರಕ್ಷಣೆ ಒದಗಿಸಲು ಮುಖ್ಯಮಂತ್ರಿ, ಗೃಹ ಸಚಿವರು ತಕ್ಷಣ ನಿರ್ದೇಶಿಸ ಬೇಕಾಗಿದೆ.
ವರ್ಷವೊಂದಕ್ಕೆ 5 ಲಕ್ಷ ಯಾತ್ರಿಕರು ದೇಶ-ವಿದೇಶಗಳಿಂದ ಮೂಡುಬಿದಿರೆ ಹಾಗೂ ಹತ್ತಿರದ ವೇಣೂರು, ಕಾರ್ಕಳದ ಜೈನ ಮಂದಿರಗಳನ್ನು ವೀಕ್ಷಿಸಲು ಬರುತ್ತಾರೆ. ಹಾಗಾಗಿ ಜೈನಮಠದ ಪೀಠಾಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ತುರ್ತಾಗಿ ಭದ್ರತಾ ಕ್ರಮ ಅಳವಡಿಸಬೇಕು.