ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ಮಂದಿರಗಳ

Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

ಮೂಡುಬಿದಿರೆ ಸಿದ್ಧಾಂತ ಮಂದಿರದಲ್ಲಿ ಪ್ರಾಚೀನ ಜಿನಬಿಂಬಗಳನ್ನು ಕಳ್ಳತನ ಮಾಡಿದ ಪ್ರಕರಣ ವರದಿಯಾಗಿದೆ. ಸ್ಥಳೀಯ ಶ್ರೀ ಜೈನಮಠದ ಆಡಳಿತಕ್ಕೊಳಪಟ್ಟ 18 ಜೈನಮಂದಿರಗಳ ರಕ್ಷಣೆಗೆ ಪೊಲೀಸ್ ಇಲಾಖೆಯಿಂದಲೂ ರಕ್ಷಣೆ ಒದಗಿಸಲು ಮುಖ್ಯಮಂತ್ರಿ, ಗೃಹ ಸಚಿವರು ತಕ್ಷಣ ನಿರ್ದೇಶಿಸ ಬೇಕಾಗಿದೆ.

ವರ್ಷವೊಂದಕ್ಕೆ 5 ಲಕ್ಷ  ಯಾತ್ರಿಕರು ದೇಶ-ವಿದೇಶಗಳಿಂದ ಮೂಡುಬಿದಿರೆ ಹಾಗೂ ಹತ್ತಿರದ ವೇಣೂರು, ಕಾರ್ಕಳದ ಜೈನ ಮಂದಿರಗಳನ್ನು ವೀಕ್ಷಿಸಲು ಬರುತ್ತಾರೆ. ಹಾಗಾಗಿ  ಜೈನಮಠದ ಪೀಠಾಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ತುರ್ತಾಗಿ ಭದ್ರತಾ ಕ್ರಮ ಅಳವಡಿಸಬೇಕು.

ಭದ್ರತೆಯ ಬಿಗಿ ಕ್ರಮಗಳನ್ನು ಅಳವಡಿಸಲು ಗೃಹ ಇಲಾಖೆ ಅಧಿಕಾರಿಗಳು ಆಗಾಗ ಈ ಸ್ಥಳಗಳಿಗೆ ಭೇಟಿ ನೀಡಿ ಲೋಪದೋಷಗಳನ್ನು ಗುರುತಿಸಿ ಸೂಕ್ತ ಕ್ರಮ ಜರುಗಿಸಬೇಕು.
-ಸುಮಂತ ಎಂ., ಮೂಡುಬಿದಿರೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT