ಅಡಿಕೆ ಕದ್ದರೂ ಕಳ್ಳ!
ಆನೆ ಕದ್ದರೂ ಕಳ್ಳ!!
ಈಗ ಹಾಗಿಲ್ಲ!!!
ಕಾಲ ಬದಲಾಗಿದೆ....
ಗಣಿ ಉಳ್ಳವರೂ
ಗಣಿ ಕಬಳಿಸಿದವರೂ
ಗಣಿ ಕಪ್ಪ ಸ್ವೀಕರಿಸಿದವರೂ
ಅಗಣಿತ ಸಂಪತ್ತು ಗಳಿಸಿದವರೂ
ಕಳ್ಳರಲ್ಲಂತೆ! ಸುಳ್ಳರಲ್ಲಂತೆ!!
ಮತ್ತೇನೇನು? ಸ್ವಾಭಿಮಾನಿ
`ಜೈಲ್ ಭರೋ~ ಚಳುವಳಿ
ಹೋರಾಟಗಾರರಂತೆ
ಭುವನೇಶ್ವರಿ ತಾಯಿ ಕಾಪಾಡು
ಚಿನ್ನದ ಖಡ್ಗ ಅರ್ಪಿಸುವ
ಹರಕೆ ಹೊತ್ತು ಕಂಬಿ ಎಣಿಸುತ್ತಿದ್ದಾರೆ!
ಶ್ರೀಸಾಮಾನ್ಯ ಪ್ರಜೆಯ ಶಾಪವಂತೆ!!