ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷಿಗಳ ಬಗ್ಗೆ ಎಚ್ಚರವಿರಲಿ

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಒಬ್ಬ ಉಪನ್ಯಾಸಕಿಯನ್ನು ವಂಚಿಸಿ 16.5 ಲಕ್ಷ ನಗದು ಹಾಗೂ ಚಿನ್ನಾಭರಣಗಳನ್ನು ಜ್ಯೋತಿಷಿಯ ಸೋಗಿನಲ್ಲಿ ವಿದ್ಯಾರ್ಥಿಯೊಬ್ಬ ಲಪಟಾ­ಯಿಸಿದ ವಿಚಾರ ಪತ್ರಿಕೆಯಲ್ಲಿ ಓದಿ (ಸೆ. 13) ನಿಜಕ್ಕೂ ಆಶ್ಚರ್ಯ­ವಾಯಿತು.

ಇತ್ತೀಚೆಗಂತೂ ಕಪಟ ಕಾವಿಧಾರಿ­ಗಳು, ಜ್ಯೋತಿಷಿಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತಾರೆ. ‘ಕೈಚಳಕ’ವನ್ನೂ ತೋರುತ್ತಿ­ದ್ದಾರೆ. ಹಣ ಸಂಪಾ ದಿಸಲು ಇದೊಂದು ಸುಲಭ ಮಾರ್ಗ­ವಾಗಿದೆ.

ಇಂಥವರ ಮಾತಿಗೆ ಮರುಳಾಗಿ ಮನೆ ಮಠ ಕಳೆದುಕೊಂಡವರು ಅದೆಷ್ಟೋ ಮಂದಿ! ಇವರ ಬಗ್ಗೆ ಜನ ಜಾಗೃತರಾಗಬೇಕಾಗಿದೆ. ಸರ್ಕಾರ ಕೂಡಾ ಇಂಥವರ ಬಗ್ಗೆ ಕಟ್ಟೆಚ್ಚರ ವಹಿಸಬೇಕಾಗಿದೆ. ದೃಶ್ಯ ಮಾಧ್ಯಮಗಳಲ್ಲಿ  ಜ್ಯೋತಿಷಿಗಳಿಗೆ ಅತಿಯಾದ ಮಹತ್ವ ನೀಡ­ಲಾ­ಗುತ್ತಿದೆ. ಅದಕ್ಕೆ ಕಡಿವಾಣ ಹಾಕುವುದು ಸಮಾಜದ ಒಳಿತಿನ ದೃಷ್ಟಿಯಿಂದ ಒಳ್ಳೆಯದು. 

  ಎಲ್ಲಕ್ಕೂ ಮಿಗಿಲಾಗಿ ನಾಳಿನ ಸತ್ಪ್ರಜೆಗಳನ್ನು ನಿರ್ಮಿಸಬೇಕಾದ ಬೋಧಕರೊಬ್ಬರು ವಂಚಕರ ಜಾಲಕ್ಕೆ ಸಿಲುಕಿದ್ದು ವಿಷಾದನೀಯ.  ಇಂಥವರೇ ಹೀಗಾದರೆ ಅನಕ್ಷರಸ್ಥರ ಪಾಡೇನು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT