ನವದೆಹಲಿ (ಪಿಟಿಐ): ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ ಅವರಿಗೆ ಸೇರಿದ ಸಂಸ್ಥೆಯಿಂದ ನೂರು ಕೋಟಿ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಝೀ ಟಿವಿ ವಾಹಿನಿಯ ಮಾಲೀಕ ಸುಭಾಶ್ಚಂದ್ರ ಮತ್ತು ಅವರ ಪುತ್ರನ ಬಂಧನಕ್ಕೆ ನೀಡಲಾಗಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ಈ ತಿಂಗಳ 20ರವರೆಗೆ ವಿಸ್ತರಿಸಲಾಗಿದೆ.
20ರ ನಂತರ ಈ ಇಬ್ಬರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದ ವಾದವನ್ನು ಆಲಿಸಲಾಗುವುದು ಎಂದು ಸೆಷನ್ ನ್ಯಾಯಾಲಯದ ನ್ಯಾಯಾಧೀಶ ರಾಜ್ ರಾಣಿ ಮಿತ್ರಾ ತಿಳಿಸಿದ್ದಾರೆ.