ಸುಮಾರು ಇಪ್ಪತ್ತು ವರ್ಷದ ಹಿಂದೆ ನಾನು ಮತ್ತು ನನ್ನ ಸಹೋದ್ಯೋಗಿ ಸರ್ಕಾರಿ ಕರ್ತವ್ಯದ ನಿಮಿತ್ತ ಕಡೂರಿಗೆ ಹೋಗಿದ್ದೆವು. ಕೆಲಸ ಮುಗಿಸಿ ತಕ್ಷಣ ನನ್ನ ಜೊತೆಗಿದ್ದವರು ಬೆಂಗಳೂರಿಗೆ ಹಿಂತಿರುಗಿದರೆ, ನಾನು ಮಾರನೇ ದಿನ ಬೆಂಗಳೂರಿಗೆ ಹೊರಟಿದ್ದೆ. ಮಧ್ಯಾಹ್ನ ಬಸ್ ನಿಲ್ದಾಣಕ್ಕೆ ಹೋಗುವ ಹಾದಿಯಲ್ಲಿ ಎಳೆನೀರು ಕುಡಿದು, ಹಣ ನೀಡಿದೆ.