ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿ: ಅದಿತಿ, ಕೃಷ್ಣ ಚಾಂಪಿಯನ್

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅದಿತಿ ನಂದಿ ಮತ್ತು ಕೃಷ್ಣ ರಂಗನಾಥ್ ಇಲ್ಲಿ ನಡೆಯುತ್ತಿರುವ ರಾಜ್ಯ ರಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ `ಮಿನಿ ಕೆಡೆಟ್~ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.

ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿ ಹಾಲ್‌ನಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಸ್ಟಾರ್ ಅಕಾಡೆಮಿಯ ಕೃಷ್ಣ 11-9, 8-11, 11-6, 11-1 ರಲ್ಲಿ ಓಂ ಟೇಬಲ್ ಟೆನಿಸ್ ಇನ್‌ಸ್ಟಿಟ್ಯೂಟ್‌ನ ಧನುಷ್ ಎಲ್ ಕುಮಾರ್ ವಿರುದ್ಧ ಜಯ ಸಾಧಿಸಿದರು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಬಿಎನ್‌ಎಂನ ಅದಿತಿ ನಂದಿ 11-8, 10-12, 11-6, 11-7 ರಲ್ಲಿ ಸಿಸಿಎನ ಅದಿತಿ ಜೋಶಿ ಅವರನ್ನು ಮಣಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ಅದಿತಿ ನಂದಿ 11-8, 11-5, 11-3 ರಲ್ಲಿ ಶರ್ವಾನಿ ಅಡಿಗ ಮೇಲೂ, ಅದಿತಿ ಜೋಶಿ 6-11, 11-9, 11-8, 11-8 ರಲ್ಲಿ ಕೆ. ನೈದಿಲೆ ಎದುರೂ ಜಯ ಪಡೆದಿದ್ದರು.

ತಂಡ ವಿಭಾಗದ ಫೈನಲ್‌ನಲ್ಲಿ ಎಸ್‌ಡಬ್ಲ್ಯುಆರ್ 3-1 ರಲ್ಲಿ ಬಿಎನ್‌ಎಂಇಐ ವಿರುದ್ಧ ಗೆಲುವು ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT