ಆಗುಂಬೆ ಪೊಲೀಸ್ ಠಾಣೆಯ ಶಂಕರಪ್ಪ (53) ಮೃತ ದುರ್ದೈವಿ. ಶಿವಮೊಗ್ಗದ ರವೀಂದ್ರ ಆರೋಪಿ ಚಾಲಕ.
ಆಗುಂಬೆ ಘಾಟಿಯಲ್ಲಿ ಮಣ್ಣು ತುಂಬಿದ ಟಿಪ್ಪರ್ ಲಾರಿ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಚಾಲಕ ಬೆಳಿಗ್ಗೆ ಒತ್ತಾಯಿಸಿದ್ದಾನೆ. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡಿಲ್ಲ. ನಂತರ ರವೀಂದ್ರ ವಾಹನವನ್ನು ಕೆರೆಕಟ್ಟೆ ಮಾರ್ಗದ ಮೂಲಕ ಮಣಿಪಾಲಕ್ಕೆ ಸಾಗಿಸಿದ್ದಾನೆ. ವಾಪಸ್ ಆಗುಂಬೆ ಮಾರ್ಗದ ಮೂಲಕ ಖಾಲಿ ಲಾರಿ ರಾತ್ರಿ 11ರ ಸುಮಾರಿಗೆ ಆಗಮಿಸಿದೆ.