ನವದೆಹಲಿ (ಪಿಟಿಐ): ಭಾರತ ತಂಡದ ಮೇಲೆ ಮಾಧ್ಯಮಗಳು ವಿಪರೀತ ಒತ್ತಡ ಹೇರುತ್ತಿವೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಹೇಳಿದ್ದಾರೆ.
“28 ವರ್ಷಗಳ ನಂತರ ವಿಶ್ವಕಪ್ ಗೆಲ್ಲುವ ಸಿದ್ಧತೆಯಲ್ಲಿರುವ ಭಾರತ ತಂಡಕ್ಕೆ ಮಾಧ್ಯಮಗಳ ಅತಿಯಾದ ಒತ್ತಡ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲೂ ಸಚಿನ್ ತೆಂಡೂಲ್ಕ ರರಿಂದ ಅಪಾರ ನಿರೀಕ್ಷೆಯನ್ನು ಮಾಧ್ಯ ಮಗಳು ಬಿಂಬಿಸುತ್ತಿವೆ. ಅವರ ಬಗ್ಗೆ ಟಿವಿಗಳಲ್ಲಿ ಬರುತ್ತಿರುವ ಕಾರ್ಯ ಕ್ರಮ ಗಳ ವೈಖರಿ ನೋಡಿದರೆ ನಿಜಕ್ಕೂ ಗಾಬ ರಿಯಾಗುತ್ತದೆ. ಇಂತಹ ಒತ್ತಡ ದಿಂದ ಅವರ ನೈಜ ಆಟದ ಮೇಲೆ ಕೆಟ್ಟ ಪರಿಣಾಮವಾಗಬಹುದು” ಎಂದಿದ್ದಾರೆ.