ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಕರ್ನಾಟಕದ ಆದಿಲ್‌ಗೆ ಮುನ್ನಡೆ

Last Updated 22 ಮೇ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಕರ್ನಾಟಕದ ಆದಿಲ್ ಕಲ್ಯಾಣ್‌ಪುರ್ ಇಲ್ಲಿ ನಡೆಯುತ್ತಿರುವ ಆರನೇ ರಮೇಶ್ ದೇಸಾಯಿ ಸ್ಮರಣಾರ್ಥ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನ 12 ವರ್ಷದೊಳಗಿನ ಬಾಲಕರ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ತಲುಪಿದ್ದಾರೆ.

ಆದಿಲ್ ತಮ್ಮ ಎರಡನೇ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಮಹಾರಾಷ್ಟ್ರದ ವಿಕ್ರಾಂತ್ ಮೆಹ್ತಾ ಅವರನ್ನು 6-0, 6-2 ರಿಂದ ಲೀಲಾಜಾಲವಾಗಿ ಸೋಲಿಸಿದರು.

ಆಂಧ್ರ ಪ್ರದೇಶದ ಅಭಿಮನ್ಯು ವಾನೆಮ್‌ರೆಡ್ಡಿ 6-0, 6-1ರಿಂದ ದೆಹಲಿಯ ಶಿವಾಂಕ್ ಭಟ್ನಾಗರ್ ಅವರನ್ನು ಸೋಲಿಸಿ ಹದಿನಾರರ ಘಟ್ಟ ತಲುಪಿದರು. ಕರ್ನಾಟಕದ ಪೂರ್ವಿ ಪಾಟೀಲ್ ಹನ್ನೆರಡು ವರ್ಷ ವಯಸ್ಸಿನೊಳಗಿನ ಬಾಲಕಿಯರ ವಿಭಾಗದ ಮೊದಲ ಸುತ್ತಿನಲ್ಲಿ  ಮಹಾರಾಷ್ಟ್ರದ ಮುಸ್ಕಾನ್ ಅವರನ್ನು 7-6, 6-2 ರಿಂದ ಸೋಲಿಸಿ ಮುನ್ನಡೆ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT