ಜನವರಿ 10ರಿಂದ 22ರ ವರೆಗೆ ಜಾತ್ರೆ ನಡೆಯಲ್ಲಿದ್ದು 19 ರಂದು ರಂಗನಾಥ ಸ್ವಾಮಿಯ ರಥೋತ್ಸವ ನಡೆಯಲಿದೆ. ಗ್ರಾಮೀಣ ಕ್ರೀಡೆಗಳಾದ ಹಗ್ಗ-ಜಗ್ಗಾಟ, ತೆಂಗಿನ ಕಾಯಿ ಸುಲಿಯುವುದು ಮತ್ತು ಮಹಿಳೆಯರಿಗೆ ರಂಗೋಲಿ, ಹೂ ಕಟ್ಟುವ ಸ್ಪರ್ಧೆಗಳನ್ನು ನಡೆಸಲಾಗುವುದು ಮತ್ತು ಕೃಷಿ ಮೇಳವನ್ನು ಏರ್ಪಡಿಸಲಾಗಿದ್ದು ವಿವಿಧ ಇಲಾಖೆಗಳು ಮತ್ತು ಕಂಪೆನಿಗಳು ಮೇಳದಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.
ಅಂಗಡಿಗಳ ಸುಂಕವು 2,70,000 ರೂಪಾಯಿ, ಜಾನುವಾರುಗಳ ಸುಂಕವು 20,600 ರೂಪಾಯಿ ಮತ್ತು ಜಾತ್ರೆ ಆವರಣದಲ್ಲಿ ಬಿದ್ದ ಗೊಬ್ಬರವು 36 ಸಾವಿರ ರೂಪಾಯಿಗಳಿಗೆ ಹರಾಜಾಯಿತು. ಪುನರ್ ನಿರ್ಮಾಣಗೊಂಡಿರುವ ದೇವಸ್ಥಾನವನ್ನು ಜಾತ್ರೆ ನಡೆಯುವ ದಿನಗಳಲ್ಲಿ ಉದ್ಘಾಟನೆ ಮಾಡುವ ಪ್ರಯತ್ನ ಮಾಡುತ್ತಿರುವುದಾಗಿ ದೇವಸ್ಥಾನದ ಸಮಿತಿ ತಿಳಿಸಿತು.
ಗ್ರಾಮ ಪಂಚಾಯಿತಿ ಅಧಕ್ಷರಾದ ಬಿ.ಕೇಶವ್, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಎಸ್.ರವಿಕುಮಾರ್,ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಜಿ.ರಾಮಕೃಷ್ಣ, ಗ್ರಾಮ ಪಂಚಾಯಿತಿ ಮಾಜಿ ಅಧಕ್ಷರಾದ ಮಂಜುನಾಥ್, ಎಚ್.ಎಸ್.ಶ್ರೀಧರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಜಯಕುಮಾರ್, ಜಾತ್ರಾ ಸಮಿತಿಯ ಸದಸ್ಯರುಗಳು, ಗ್ರಾ.ಪಂ.ಸದಸ್ಯರುಗಳು, ಕಂದಾಯ ವೃತ್ತ ನಿರೀಕ್ಷಕರಾದ ರಾಮ್ಶೆಟ್ಟಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.