ಬೆಂಗಳೂರು: ನಾಯಂಡಹಳ್ಳಿ ಜಂಕ್ಷನ್ ಬಳಿ ಗುರುವಾರ ಸಂಜೆ ತಳ್ಳುವ ಗಾಡಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಪಾತ್ರೆ ವ್ಯಾಪಾರಿಯೊಬ್ಬರು ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಂಗೊಂಡನಹಳ್ಳಿ ನಿವಾಸಿ ಸಲ್ಮಾನ್ ಪಾಷಾ (20) ಮೃತಪಟ್ಟವರು. ಪಾತ್ರೆ ವ್ಯಾಪಾರಿಯಾದ ಅವರು, ಪಾತ್ರೆಗಳಿದ್ದ ಗಾಡಿಯನ್ನು ತಳ್ಳಿಕೊಂಡು ಸಂಜೆ 6.30ರ ಸುಮಾರಿಗೆ ನಾಯಂಡಹಳ್ಳಿ ಮೇಲ್ಸೇತುವೆ ಮಾರ್ಗವಾಗಿ ಮನೆಗೆ ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ಟ್ರ್ಯಾಕ್ಟರ್ ಅವರಿಗೆ ಡಿಕ್ಕಿ ಹೊಡೆದಿದೆ.