ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ-20 ಕ್ರಿಕೆಟ್‌ಗೆ ಪಂದ್ಯಕ್ಕೂ ಮುನ್ನ ಆಟಗಾರರಿಗೆ ರಜೆ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ದೀಪಾವಳಿ ಹಬ್ಬದ ಕಾರಣ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರಿಗೆ ಎರಡು ದಿನಗಳ ಮಟ್ಟಿಗೆ ರಜೆ ನೀಡಿದೆ.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶನಿವಾರ ಇಂಗ್ಲೆಂಡ್ ವಿರುದ್ಧ ಟ್ವೆಂಟಿ-20 ಕ್ರಿಕೆಟ್ ಪಂದ್ಯವಿರುವ ಕಾರಣ ಈ ಮೊದಲು ಕೋಲ್ಕತ್ತದಲ್ಲಿಯೇ ಇರಲು ಆಟಗಾರರಿಗೆ ಸೂಚಿಸಲಾಗಿತ್ತು. ಆದರೆ ಕೆಲ ಆಟಗಾರರು ವಿನಂತಿ ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.

ಹಾಗಾಗಿ ಆಟಗಾರರು ಬುಧವಾರ ಬೆಳಿಗ್ಗೆ ತಮ್ಮೂರಿಗೆ ತೆರಳಿದರು. ಶುಕ್ರವಾರ ಬೆಳಿಗ್ಗೆ ಮತ್ತೆ ಕೋಲ್ಕತ್ತಕ್ಕೆ ಹಿಂತಿರುಗಲಿದ್ದಾರೆ. ಬಳಿಕ ಅಭ್ಯಾಸ ನಡೆಸಲಿದ್ದಾರೆ.

`ಹೌದು, ನಮಗೆ ಎರಡು ದಿನ ಬಿಡುವು ಲಭಿಸಿದೆ. ನಾನು ರಾಂಚಿಗೆ ತೆರಳಲಿದ್ದೇನೆ. ಪೋಷಕರನ್ನು ಭೇಟಿಯಾಗಿ ಒಂದು ತಿಂಗಳಾಯಿತು~ ಎಂದು ನಾಯಕ ದೋನಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT