ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಕೇಂದ್ರ ಕಚೇರಿಯ ಮುಖ್ಯ ನಿಯಂತ್ರಕರಾದ ಡಾ. ಕೇಶವ ದತ್ತಾತ್ರೇಯ ನಾಯಕ್ ಅವರಿಗೆ ರಕ್ಷಣಾ ಇಲಾಖೆ ನೀಡುವ `ವಿಶಿಷ್ಟ ವಿಜ್ಞಾನಿ~ ಬಿರುದು ದೊರೆತಿದೆ.
ದೇಶದ ರಕ್ಷಣೆ ಮತ್ತು ಸಂಶೋಧನೆಯ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಗುರುತಿಸಿ ಈ ಪದವಿ ನೀಡಲಾಗಿದೆ ಎಂದು ಡಿಆರ್ಡಿಒ ಪ್ರಕಟಣೆ ತಿಳಿಸಿದೆ. ಡಾ. ನಾಯಕ್ ಅವರು ಉತ್ತರ ಕನ್ನಡ ಜಿಲ್ಲೆಯವರು.