ಪ್ರತಾಪಗಡ (ಉತ್ತರ ಪ್ರದೇಶ): ಕಳೆದ ತಿಂಗಳ ಹಿಂದೆ ನಡೆದ ಡಿಎಸ್ಪಿ ಜಿಯಾ-ಉಲ್-ಹಕ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಸಿಬಿಐ ಶನಿವಾರ ಬಂಧಿಸಿದೆ.
ಈ ಕೊಲೆ ಪ್ರಕರಣವನ್ನು ಭೇದಿಸಿರುವುದಾಗಿ ಸಿಬಿಐ ಹೇಳಿಕೊಂಡಿದೆ. ಗ್ರಾಮ ಪಂಚಾಯಿತಿ ಮುಖಂಡ ದಿ.ನನ್ಹೆ ಯಾದವ್ ಅವರ ಪುತ್ರ ಬಬ್ಲೂ ಯಾದವ್ ಎಂಬಾತನನ್ನು ಬಂಧಿಸಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.