ಸೆಪ್ಟೆಂಬರ್ನಲ್ಲಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರನ್ನು ಭೇಟಿ ಮಾಡಿದ್ದ ಶ್ರೀನಿವಾಸಮೂರ್ತಿ, `ಜಿಲ್ಲಾಧಿಕಾರಿಯ ಪರವಾಗಿ ರಾಜೇಶ್ವರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ' ಎಂದು ಮಾಹಿತಿ ನೀಡಿದ್ದರು. ಅಯ್ಯಪ್ಪ ಅವರೇ ಖುದ್ದಾಗಿ ಬೇಡಿಕೆ ಇಡುತ್ತಿರುವುದನ್ನು `ರೆಕಾರ್ಡ್' ಮಾಡಿಕೊಂಡು ತರುವಂತೆ ಶಿವಶಂಕರ್ ಅವರು ಶ್ರೀನಿವಾಸಮೂರ್ತಿ ಅವರಿಗೆ ಸೂಚನೆ ನೀಡಿದ್ದರು.