ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್‌ ಕಪ್‌: ಆನಂದ್‌ ಅಮೃತ್‌ರಾಜ್‌ ನಾಯಕ

Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾಜಿ ಆಟಗಾರ ಆನಂದ್‌ ಅಮೃತ್‌ರಾಜ್‌ ಅವರು ಭಾರತ ಡೇವಿಸ್‌ ಕಪ್‌ ಟೆನಿಸ್‌ ತಂಡದ ನೂತನ ನಾಯಕರಾಗಿ (ಆಟವಾಡದ) ನೇಮಕಗೊಂಡಿದ್ದಾರೆ.

ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಶನಿವಾರ ಈ ನಿರ್ಧಾರ ಕೈಗೊಂಡಿತು. 61ರ ಹರೆಯದ ಅಮೃತ್‌ರಾಜ್‌ ಅವರು ಎಸ್‌.ಪಿ. ಮಿಶ್ರಾ ಅವರಿಂದ ತೆರವಾದ ಸ್ಥಾನ ತುಂಬಲಿದ್ದಾರೆ.  ಅಮೃತ್‌ರಾಜ್‌ 2014ರ  ಕೊನೆಯವರೆಗೆ ನಾಯಕರಾಗಿ ಮುಂದುವರಿಯುವರು.
  
‘ಸೆ. 21 ರಂದು ಗೋವಾದಲ್ಲಿ ನಡೆದ ಎಐಟಿಎ ಕಾರ್ಯಕಾರಿ ಸಮಿತಿ ಸಭೆ ಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳ ಲಾಯಿತು’ ಎಂದುಎಐಟಿಎ ಕಾರ್ಯ ದರ್ಶಿ ಭರತ್‌ ಓಜಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT