ಬಸವನಗುಡಿಯ ಆಶ್ರಮ ಮುಂಭಾಗ ಮೆಕ್ಡೊನಾಲ್ಡ ಮಳಿಗೆ ಹತ್ತಿರದ, ವಾಣಿವಿಲಾಸ ರಸ್ತೆಯ ಬಸವಣ್ಣಗುಡಿಯ ಹತ್ತಿರದ ಹಾಗೂ ಬಸವನಗುಡಿ ಪೊಲೀಸ್ ಠಾಣೆಯ ಮುಂಭಾಗದ ಹಾಗೂ ಎದುರುಗಡೆಯ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ವಿನಾಕಾರಣ ತೆಗೆದುಹಾಕಲಾಗಿದೆ. ಇದರಿಂದ ಬಸ್ಗಾಗಿ ಕಾಯುವುದು ದುಸ್ತರವಾಗಿದೆ. ಆದ್ದರಿಂದ ಇವುಗಳನ್ನು ಮತ್ತೆ ನಿರ್ಮಿಸಬೇಕೆಂದು ಪ್ರಾರ್ಥನೆ. ದಯವಿಟ್ಟು ತಂಗುದಾಣಗಳನ್ನು ಪುನಃ ನಿರ್ಮಾಣ ಮಾಡಲಿ.