ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ನಿಷೇಧ: ಸರ್ಕಾರದ ದ್ವಂದ್ವ– ಟೀಕೆ

ವಿವಿಧ ಇಲಾಖೆ ಅಧಿಕಾರಿಗಳಿಗೆ ಕಾರ್ಯಾಗಾರ
Last Updated 18 ಡಿಸೆಂಬರ್ 2013, 9:13 IST
ಅಕ್ಷರ ಗಾತ್ರ

ಕೋಲಾರ: ತಂಬಾಕು ಮಾರಾಟ ನಿಷೇಧ ಕಾಯ್ದೆ ಜಾರಿಗೊಳಿಸುತ್ತಿರುವ ಸರ್ಕಾರವೇ ತಂಬಾಕು ಬೆಳೆಯಲು ಉತ್ತೇಜನ ನೀಡುತ್ತದೆ. ಇಂಥ ದ್ವಂದ್ವ ನೀತಿ ಕಾರಣಕ್ಕೆ ಕಾಯ್ದೆಗಳು ಸರಿ­ಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಆರ್.­ನಾರಾ­ಯಣಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಂಬಾಕು ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸಲು ವಿವಿಧ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾ­ಗಾರದಲ್ಲಿ ಮಾತನಾಡಿ, ಯಾವುದೇ ವಸ್ತುವಿನ ಬಳಕೆಯನ್ನು ನಿಷೇಧಿಸುವ ಮುನ್ನ ಅದರ ಉತ್ಪಾದನೆಯನ್ನು ನಿಲ್ಲಿಸ­ಬೇಕು. ಆದರೆ ಸರ್ಕಾರ ಆ ಕೆಲಸವನ್ನು ಮಾಡದೇ ನಿಷೇಧ ಕಾಯ್ದೆಗಳನ್ನು ಜಾರಿಗೊಳಿಸಿ ಎನ್ನುವುದು ವಿಪರ್ಯಾಸ ಎಂದರು.

ಮದ್ಯಪಾನವನ್ನು ಯಾರೂ ಮಾಡ­ಬಾರದು ಎಂದೂ ಸರ್ಕಾರ ಹೇಳುತ್ತದೆ. ಆದರೆ ಅಭಿವೃದ್ಧಿ ಕಾರ್ಯಗಳಿಗೆ ಬಳ­ಸಲು ಮದ್ಯ ಮಾರಾಟದಿಂದ ದೊರ­ಕುವ ಅಪಾರ ತೆರಿಗೆಗಳನ್ನೇ ನೆಚ್ಚಿ­ಕೊಂಡಿದೆ ಎಂದು ವ್ಯಂಗ್ಯವಾಡಿದರು.

ಶಾಲೆಯ ಅಕ್ಕ ಪಕ್ಕದಲ್ಲೇ ತಂಬಾಕು ಮಾರಾಟ ನಡೆಯುತ್ತಿದೆ. ಮಕ್ಕಳ ಎದು­ರಿ­ನಲ್ಲೇ ದೊಡ್ಡವರು ಬೀಡಿ, ಸಿಗರೇಟು ಸೇದುತ್ತಾರೆ. ಗುಟಕಾ, ಪಾನ್ ಪರಾಗ್  ಮತ್ತಿತರೆ ತಂಬಾಕು ಉತ್ಪನ್ನಗಳನ್ನು ಜಗಿದು ಉಗಿಯುತ್ತಾರೆ. ಇಂಥ ಸನ್ನಿ­ವೇಶ ಬದಲಿಸಲು ಹೊಸ ಬಗೆಯಲ್ಲಿ ಅಧಿಕಾರಿಗಳು ಶ್ರಮಿಸಬೇಕು ಎಂದರು.

ಕಾರ್ಯಾಗಾರಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಿ.ಕೆ.ರವಿ, ತಂಬಾಕು ನಿಷೇಧ ಕಾಯ್ದೆಯನ್ನು ಜಾರಿಗೊಳಿಸು­ವಲ್ಲಿ ಪೊಲೀಸರೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಜವಾ­ಬ್ದಾರಿಯನ್ನು ಮತ್ತೊಂದು ಇಲಾಖೆ ಮೇಲೆ ಹೊರೆಸಿ ನೆಪ ಹೇಳುವ ಪ್ರವೃತ್ತಿ­ಅಧಿಕಾರಿಗಳು ಬಿಡಬೇಕು ಎಂದರು.

ಜಿಲ್ಲಾ ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಮೋಲ್, ಹೆಚ್ಚುವರಿ ಪೊಲೀಸ್ ವರಿ­ಷ್ಠಾಧಿಕಾರಿ ಎಂ.ಐ.ಜಮೀಲ್, ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಮೀರ್ ಪಾಷಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರಮೇಶಬಾಬು ಮಾತನಾಡಿದರು.

ನಂತರ, ದೇವರಾಜ ಅರಸ್ ವೈದ್ಯ­ಕೀಯ ಕಾಲೇಜಿನ  ಕಾಲೇಜಿನ ಸಮು­ದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಮುನಿನಾರಾಯಣ,  ಡಾ.ಅನಿಲ್  ಮತ್ತು ಡಾ.ಜಗನ್ನಾಥ್ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT