ಆದರೆ 1 ಎಕರೆ ಪ್ರದೇಶದಲ್ಲಿ ಇಂತಹ ದೃಶ್ಯ ಪ್ರತಿ ವರ್ಷ ಸಾಮಾನ್ಯವಾಗಿ ಬಿಟ್ಟಿದೆ. ಈ ಹಿಂದಿನ ವರ್ಷ ಕೂಡಾ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತು ಬೆಳೆ ಹಾನಿ ಸಂಭವಿಸಿತ್ತು. ಇಲಾಖೆಗೆ ಫೊಟೊ ಸಮೇತ ವರದಿ ಸಲ್ಲಿಸಿದರೂ ಇಲ್ಲಿಯವರೆಗೆ ಬೆಳೆ ಹಾನಿ ದೊರೆತಿಲ್ಲ. ಈ ವರ್ಷ ಕೂಡಾ 1 ಎಕರೆ ಪ್ರದೇಶದಲ್ಲಿ ಇದೇ ರೀತಿ ನೀರು ನಿಂತಿದೆ. ಇದರಿಂದ ಭೂಮಿ ಸತ್ವ ಕಳೆದುಕೊಂಡಿದೆ. ಬೆಳೆ ಹಾನಿ ಸಾಮಾನ್ಯವಾಗಿದೆ. ಆದರೆ ಪರಿಹಾರ ಮಾತ್ರ ಶೂನ್ಯ. ಇಂತಹ ಪರಿಸ್ಥಿತಿ ಮೂರು ವರ್ಷದಿಂದ ಮುಂದುವರಿದಿದೆ.