ಬೆಂಗಳೂರು (ಪಿಟಿಐ): ಚರ್ಚ್ ಮೇಲಿನ ದಾಳಿಯ ತನಿಖಾವರದಿಯ ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಲು ನಿರಾಕರಿಸಿದ ಸಭಾಧ್ಯಕ್ಷರ ಕ್ರಮವನ್ನು ಖಂಡಿಸಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸೋಮವಾರ ವಿಧಾನಸಭೆ ಕಲಾಪ ಬಹಿಷ್ಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ‘ತನಿಖಾ ವರದಿಯಿಂದಾಗಿ ಕ್ರೈಸ್ತ ಸಮುದಾಯದವರಲ್ಲಿ ಅಭದ್ರತೆಯ ಭಾವನೆ ಮೂಡಿದ್ದು, ಅವರಿಗೆ ನ್ಯಾಯ ಒದಗಿಸಬೇಕು’ ಎಂದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್ಕುಮಾರ್ ‘ವರದಿಯನ್ನು ಸದನದಲ್ಲಿ ಪರಿಶೀಲಿಸಿದ ನಂತರ ಚರ್ಚೆಗೆ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.
‘ವಿಧಾನಸಭೆಯ ಇತಿಹಾಸದಲ್ಲೇ ಯಾವುದೇ ಒಂದು ಪ್ರಕರಣದ ವರದಿಯನ್ನು ಸದನದಲ್ಲಿ ಪರಿಶೀಲಿಸುವ ಪೂರ್ವದಲ್ಲಿ ಚರ್ಚೆಗೆ ಅವಕಾಶ ನೀಡಿದ ಉದಾಹರಣೆಗಳಿಲ್ಲ. ಇದೀಗ ನಿಲುವಳಿ ಸೂಚನೆಗೆ ಅವಕಾಶ ನೀಡುವುದರಿಂದ ‘ಕೆಟ್ಟ ನಡುವಳಿಕೆ’ಗೆ ಅನುಮತಿ ನೀಡಿದಂತಾಗುತ್ತದೆ.’ ಎಂದು ಅವರು ಹೇಳಿದರು.