ವಿಶ್ವಸಂಸ್ಥೆ (ಪಿಟಿಐ):`ನಾಗರಿಕರ ಹತ್ಯೆ ನಿಲ್ಲಿಸಬೇಕು. ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಅಂತರ ರಾಷ್ಟ್ರೀಯ ತನಿಖೆಗೆ ಒಪ್ಪಿಕೊಳ್ಳಬೇಕು~ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸದ್ ಅವರಿಗೆ ಸೂಚಿಸಿದ್ದಾರೆ.
`ಮೂರು ಸಾವಿರಕ್ಕಿಂತ ಹೆಚ್ಚು ನಾಗರಿಕರ ಹತ್ಯೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಾಗುವುದಿಲ್ಲ. ಕೂಡಲೇ ಇದು ಕೊನೆಗಾಣಬೇಕು. ಅಂತರರಾಷ್ಟ್ರೀಯ ತನಿಖೆಗೆ ಒಪ್ಪಿಕೊಂಡು ಮಾತುಕತೆಗೆ ಮುಂದಾಗಬೇಕು~ ಎಂದು ಅವರು ಸಲಹೆ ಮಾಡಿದ್ದಾರೆ.