ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟಿನ ಹೊರಹರಿವನ್ನು 8,580 ಕ್ಯೂಸೆಕ್ನಿಂದ 11,704 ಕ್ಯೂಸೆಕ್ಗೆ ಹೆಚ್ಚಿಸಲಾಗಿದೆ.
ತಮಿಳುನಾಡಿಗೆ ಈ ಹಿಂದೆ 3,301 ಕ್ಯೂಸೆಕ್ ನೀರು ಹರಿದು ಹೋಗುತ್ತಿತ್ತು, ಗುರುವಾರದಿಂದ ಅದರ ಪ್ರಮಾಣವು 6,405 ಕ್ಯೂಸೆಕ್ಗೆ ಹೆಚ್ಚಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸರದಿ ಉಪವಾಸ ಮಾಡುತ್ತಿದ್ದ ಜಿ. ಮಾದೇಗೌಡ ಸೇರಿದಂತೆ ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.