ಚೆನ್ನೈ (ಪಿಟಿಐ): ತಮಿಳುನಾಡು ಸಚಿವ ಸಿ. ಕರುಪ್ಪಸ್ವಾಮಿ (57 ) ಶನಿವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕರುಪ್ಪಸ್ವಾಮಿ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಮೃತರು ತಾಯಿ, ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮುಖ್ಯಮಂತ್ರಿ ಜಯಲಲಿತಾ ಅವರ ಕ್ಯಾಬಿನೆಟ್ ಸಚಿವರಲ್ಲಿ ಮೃತಪಟ್ಟವರಲ್ಲಿ ಕರುಪ್ಪಸ್ವಾಮಿ ಎರಡನೆಯವರು. ಈ ಹಿಂದೆ ಮತ್ತೊಬ್ಬ ಸಚಿವ ಮರಿಯಮ್ ಪಿಚೈ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.