ಲಂಡನ್ (ಪಿಟಿಐ): ಭಾರತದ ಗೌತಮ್ ಗಂಭೀರ್ ಕೌಂಟಿ ಕ್ರಿಕೆಟ್ ಋತುವನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಬಂದಿದ್ದಾರೆ. `ಕೌಟುಂಬಿಕ ಕಾರಣ'ಗಳಿಂದಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಗಂಭೀರ್ ಪ್ರಸಕ್ತ ಕೌಂಟಿ ಋತುವಿನಲ್ಲಿ ಎಸೆಕ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು.
`ಕೌಟುಂಬಿಕ ಕಾರಣಗಳಿಂದಾಗಿ ಗಂಭೀರ್ ಭಾನುವಾರ ತಮ್ಮ ತವರು ದೇಶ ಭಾರತಕ್ಕೆ ತೆರಳಿದ್ದಾರೆ. ಈ ಹಂತದಲ್ಲಿ ನಮಗೆ ಹೆಚ್ಚಿನ ಏನನ್ನೂ ಹೇಳಲು ಸಾಧ್ಯವಿಲ್ಲ. ಪ್ರಸಕ್ತ ಋತು ಕೊನೆಗೊಳ್ಳುವ ಮುನ್ನ ಅವರು ಮತ್ತೆ ತಂಡವನ್ನು ಸೇರುವರು ಎಂಬ ವಿಶ್ವಾಸ ನಮ್ಮದು' ಎಂದು ಎಸೆಕ್ಸ್ ತಂಡ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.