ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಡಾ.ರಾಜೇಂದ್ರ ಬೆನಕನಾಳ ಅವರು ಪ್ರಾರ್ಥನಾ ಮಂದಿರದಲ್ಲಿ ಸಾಮೂಹಿಕ ಚಿಕಿತ್ಸೆ ನೀಡಿದರು. ಗ್ರಾಮದ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಗ್ರಾಮದಲ್ಲಿ 150ಕ್ಕೂ ಹೆಚ್ಚಿನ ಜನರು ರೋಗದಿಂದ ಬಳಲುತ್ತಿದ್ದು ಶಂಕಿತ ಜ್ವರ ಎಂದು ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಒಂದು ವಾರದಲ್ಲಿ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದರು. ರೋಗಿಗಳ ರಕ್ತವನ್ನು ಪರೀಕ್ಷೆಗೆ ಕಳುಹಿಸಿದ್ದು ವರದಿ ಬಂದ ನಂತರಚಿಕೂನ್ಗುನ್ಯಾ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು. ಅಂದಾಜು 650 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಬಹುತೇಕರು ಜ್ವರದಿಂದ ಬಳಲುತ್ತಿದ್ದಾರೆ ಎಂದು ಚಿಕಿತ್ಸೆಗೆ ಆಗಮಿಸಿದ ಮೆಹಬೂಬ್ ಮುಲ್ಲಾ, ಮಲ್ಲಮ್ಮ, ಗಂಗಮ್ಮ, ಮಾಸುಂಬೀ, ಯಲ್ಲಮ್ಮ, ಕಾವೇರಿ ಮುಂತಾದವರು ತಿಳಿಸಿದರು.