ನವದೆಹಲಿ (ಪಿಟಿಐ): 2002ರ ಗಲಭೆಯಲ್ಲಿ ಸತ್ತವರ ಶವಗಳನ್ನು ಅಗೆದು ತೆಗೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ವಿರುದ್ಧ ತನಿಖೆ ಆರಂಭಿಸಿರುವ ಗುಜರಾತ್ ರಾಜ್ಯ ಸರ್ಕಾರದ ಕ್ರಮಕ್ಕೆ ಸುಪ್ರೀಂಕೋರ್ಟ್ ಬುಧವಾರ ತೀವ್ರವಾಗಿ ಆಕ್ಷೇಪಿಸಿದೆ.
ಇದು ಸೆಟಲ್ವಾಡ್ ಅವರನ್ನು ಬಲಿಪಶು ಮಾಡಲು ಹೆಣೆದಿರುವ ಹುಸಿ ಪ್ರಕರಣ ಎಂದು ಹೇಳಿದೆ.
`ಇದು ಒಂದಿಷ್ಟೂ ಸತ್ಯಾಂಶವಿಲ್ಲದ, ತೀಸ್ತಾ ಅವರನ್ನು ಬಲಿಪಶು ಮಾಡುವ ಹುನ್ನಾರದಿಂದ ಹೆಣೆದಿರುವ ಸುಳ್ಳು ಪ್ರಕರಣವಾಗಿದೆ~ ಎಂದು ನ್ಯಾಯಮೂರ್ತಿಗಳಾದ ಅಫ್ತಾಬ್ ಅಲಂ ಮತ್ತು ರಂಜನಾ ಪ್ರಕಾಶ್ ದೇಸಾಯಿ ಅವರ ನ್ಯಾಯಪೀಠ ಹೇಳಿದೆ.