ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಲಗಲಿ ದುರಾಚಾರ

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಎಂಜಲೆಲೆಗಳ ಮೇಲೆ ಉರುಳು ಸೇವೆ
ನಾಚಿಕೆಯಲಿ ನಾಗರಿಕರ ತಲೆ ತಗ್ಗಿಸಿವೆ
ಆದರೇನಂತೆ ಡಾಕ್ಟರು ಇಂಜಿನಿಯರು
ಕೊಡುವರಿದಕೆ ಮನಶ್ಶಾಂತಿಯ ಹೆಸರು
ಇದ್ದರೇನಂತೆ ಎದುರಿಗೇ ಪೊಲೀಸರು
ಎಲ್ಲರೂ  ಮೂಢ ನಂಬಿಕೆಗಳ ದಾಸರು

ಮನುಜ ಚಂದ್ರನ ಮೇಲೆ ಇಳಿದರೇನಂತೆ
ನಡೆಯುತಲೇ ಇದೆ ಅನಾಗರಿಕತೆಯ ಸಂತೆ  
ಮೈಗೆ ಮೆತ್ತಿಕೊಂಡರೆ ಊಟದ ಮುಸುರೆ                   
ತೊಳೆಯುವುದೇ ಮನದೊಳಗಿನ ಕೆಸರು
ಓ ದೇವರೇ ! ನೀನೇ ತೊಲಗಿಸು ಅಜ್ಞಾನ
ಮುಂದಿನ ಪೀಳಿಗೆಗೆ ಕರುಣಿಸು ಸುಜ್ಞಾನ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT