ಕೊಪ್ಪಳ: ಜಿಲ್ಲೆಯಲ್ಲಿ ತೋಟಗಾರಿಕೆ ವಿಸ್ತರಣೆಗೊಳಿಸಲು ಸುಜಲಾ ಯೋಜನೆ ಆರಂಭಿಸಲಾಗಿದೆ. ಇಲ್ಲಿನ ಶಿವಶಾಂತವೀರ ನಗರದ ಬಿಸರಳ್ಳಿ ಲೇಔಟ್ನಲ್ಲಿ ಯೋಜನಾಧಿಕಾರಿ ಕಚೇರಿ ತೆರೆಯಲಾಗಿದೆ.
ಜಿಲ್ಲೆಯು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸೂಕ್ತವಾದ ಮಣ್ಣು ಮತ್ತು ಹವಾಮಾನ ಹೊಂದಿದ್ದು, ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ವಿಪುಲ ಅವಕಾಶವಿದೆ. ಈ ನಿಟ್ಟಿನಲ್ಲಿ ಜಾರಿಯಾದ ಮೊದಲ ಹಂತದ ಸುಜಲಾ ಯೋಜನೆಯು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡ ಹಿನ್ನೆಲೆಯಲ್ಲಿ ಸುಜಲಾ-3 ಕೆಡಬ್ಲ್ಯೂಡಿಪಿ-–2ನ್ನು ಕೊಪ್ಪಳ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಜಾರಿಗೊಳಿಸಲಾಗಿದೆ. ತೋಟಗಾರಿಕೆ ಇಲಾಖೆಯು ಇತರ ಇಲಾಖೆಗಳ ಯೋಜನೆಗಳ ಜತೆ ಈ ಯೋಜನೆ ಜಾರಿಗೆ ತಂದಿದೆ. ರಾಜ್ಯದ 7 ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿದೆ.
ಯೋಜನೆ ಅಡಿ ಕಾರ್ಯಕ್ರಮಗಳು: ವಾರ್ಷಿಕ, ಬಹುವಾರ್ಷಿಕ ತೋಟಗಾರಿಕೆ ಬೆಳೆ ಪ್ರದೇಶಗಳ ವಿಸ್ತರಣೆ, ಪ್ರಾತ್ಯಕ್ಷಿಕೆ, ಬೆಳೆ ವೈವಿಧ್ಯ, ಮಣ್ಣು ನೀರು ಸಂರಕ್ಷಣೆ, ಉತ್ಪಾದಕತೆ ಹೆಚ್ಚಳಗೊಳಿಸುವುದು, ಉತ್ತಮ ಸಸಿ ಉತ್ಪಾದನೆ, ಪ್ರಯೋಗಾಲಯ ಸ್ಥಾಪನೆ, ಕೊಯ್ಲೋತ್ತರ ನಿರ್ವಹಣೆ, ಮಾರುಕಟ್ಟೆ ಸಂಪರ್ಕ ನೀಡುವುದು ಸೇರಿದೆ.
ಅನುಷ್ಠಾನ: ಜಿಲ್ಲೆಯ ನಾಲ್ಕು ತಾಲ್ಲೂಕುಗಳ 38 ನಿಗದಿತ ಕಿರು ಜಲಾನಯನ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ವಿವರ: ಯಲಬುರ್ಗಾ ತಾಲ್ಲೂಕು: ನಿಲೋಗಲ್, ಹುಣಶಿಹಾಳ, ಮುರಡಿ, ವಣಗೇರಿ, ಗುತ್ತುರು, ನೆಲಜೇರಿ, ಬಿಎನ್ ಹಳ್ಳಿ. ಕುಷ್ಟಗಿ ತಾಲ್ಲೂಕು: ಯಲಬುಣಚಿ, ಬೆನಕನಾಳ, ಮಡಿಕೇರಿ, ಮುದ್ದಟಗಿ, ದೇವಲಾಪುರ, ಕೊಪ್ಪಳ ತಾಲ್ಲೂಕು: ಕೋಡದಾಳ, ಕನಕಾಪೂರ, ಬುಡಶೆಟ್ನಾಳ, ಕಿನ್ನಾಳ, ಹಟ್ಟಿ, ದೇವಲಾಪೂರ, ಚಿಕ್ಕಬಿಡನಾಳ, ಗಂಗಾವತಿ ತಾಲ್ಲೂಕು: ಗುಡದೂರು, ಮಲ್ಲಾಪುರ, ನೀರಲೂಟಿ, ಹಿರೆಖೇಡ, ಹನುಮನಾಳ ಗ್ರಾಮ.
ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಸುಜಲಾ ಯೋಜನಾಧಿಕಾರಿ ಕಚೆೇರಿಯ ದೂರವಾಣಿ ಸಂಖ್ಯೆ: 08539- 220047 ಸಂಪರ್ಕಿಸಬಹುದು ಎಂದು ಯೋಜನಾಧಿಕಾರಿ ಮಹಮ್ಮದ್ ಅಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.