ಹೀಗಾಗಿ 362 ಕೆ.ಎ.ಎಸ್ ಹುದ್ದೆಗಳ ಮುಖ್ಯ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲಿ. ಬರಿ ಒಂದು ವಿಷಯದವರೇ ಹೆಚ್ಚು ಆಯ್ಕೆಗೊಳ್ಳುತ್ತಿರುವ ಅವೈಜ್ಞಾನಿಕ ಕ್ರಮ ತಪ್ಪಲಿ. ಎಲ್ಲಾ ವಿಷಯಗಳ ಪ್ರಶ್ನೆಪತ್ರಿಕೆಗಳು ಸಮಾನ ಕ್ಲಿಷ್ಟತೆಯಡಿ ರೂಪುಗೊಳ್ಳಲಿ.
ಈಗಾಗಲೇ ಮೌಲ್ಯಮಾಪನ ಮಾಡಿ ನೀಡಿರುವ ಅಂಕಗಳನ್ನು ಅನೂರ್ಜಿತಗೊಳಿಸಿ ನಂಬಲರ್ಹ ತಂಡದಿಂದ ಯಾವುದೇ ಒತ್ತಡವಿಲ್ಲದೆ ಮೌಲ್ಯಮಾಪನ ಮಾಡಿಸಿ ಹೊಸದಾಗಿ ಸಂದರ್ಶನಕ್ಕೆ ಪಟ್ಟಿ ಸಿದ್ಧಗೊಳಿಸಬೇಕು. ಅನರ್ಹರಿಗೆ ಮಣೆ ಹಾಕಿದರೆ ದಕ್ಷ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬರ ಬರುತ್ತದೆ.