ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಸುಡಾನ್‌: ನಿರಾಶ್ರಿತರಿಗೆ ರಕ್ಷಣೆ

ದೇಶದ ಅರ್ಧ ಭಾಗಕ್ಕೆ ವ್ಯಾಪಿಸಿದ ಹಿಂಸಾಚಾರ
Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಜುಬಾ (ಎಎಫ್‌ಪಿ): ದಕ್ಷಿಣ ಸುಡಾನ್‌­­ನಲ್ಲಿ ಬಂಡುಕೋರರ ವಿರುದ್ಧ ನಡೆಯುತ್ತಿರುವ ಸೇನೆಯ ಕ್ರಮದಿಂದ ಕನಿಷ್ಠ ೪೫ ಸಾವಿರ ಜನರು ನಿರಾಶ್ರಿತರಾಗಿದ್ದು, ವಿಶ್ವಸಂಸ್ಥೆಯ ಶಿಬಿರ­­ದಲ್ಲಿ ರಕ್ಷಣೆ ನೀಡಲಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಬಂಡುಕೋರರು ನಡೆಸುತ್ತಿರುವ ಹಿಂಸಾಚಾರ ಹತ್ತು ರಾಜ್ಯಗಳನ್ನು ಹೊಂದಿರುವ ದೇಶದ ಅರ್ಧಭಾಗಕ್ಕೆ ವ್ಯಾಪಿಸಿದೆ ಎಂದೂ ಅದು ತಿಳಿಸಿದೆ.

ರಾಜಧಾನಿ ಜುಬಾದಲ್ಲಿನ ವಿಶ್ವ­ಸಂಸ್ಥೆಯ ಎರಡು ರಕ್ಷಣಾ ಶಿಬಿರದಲ್ಲಿ ಕನಿಷ್ಠ ಇಪ್ಪತ್ತು ಸಾವಿರ ಜನರಿಗೆ ರಕ್ಷಣೆ ನೀಡಲಾಗಿದೆ. ಉಗ್ರರ ವಶದಲ್ಲಿರುವ ಬೊರ್‌ ಮತ್ತು  ಬೆಂಟಿ ಪಟ್ಟಣಗಳ­ಲ್ಲಿರುವ ಶಿಬಿರಗಳಲ್ಲಿ ಕ್ರಮವಾಗಿ ೧೭ ಮತ್ತು ಏಳು ಸಾವಿರ ಜನರಿಗೆ ರಕ್ಷಣೆ ಒದಗಿಸಿರುವುದಾಗಿ ವಿಶ್ವಸಂಸ್ಥೆ ವಕ್ತಾರರು ತಿಳಿಸಿದ್ದಾರೆ.

ಬಂಡುಕೋರರ ಹಿಂಸಾಚಾರ­ದಿಂದಾಗಿ ದಕ್ಷಿಣ ಸುಡಾನ್‌ನಲ್ಲಿ ಇದುವರೆಗೆ ಸುಮಾರು ೮೧ ಸಾವಿರ ಮಂದಿ ಮನೆಮಠ ಕಳೆದುಕೊಂಡಿ­ದ್ದಾರೆ ಎಂದು ಅಂದಾಜು ಮಾಡಲಾ­ಗಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಬಂಡುಕೋರರು ಮತ್ತು ಸೇನೆಯ ಘರ್ಷಣೆಯಲ್ಲಿ ಇದುವರೆಗೆ ಸುಮಾರು ಐನೂರು ಮಂದಿ ಸತ್ತಿ­ದ್ದಾರೆ ಎಂದು ಅಧಿಕೃತವಾಗಿ ತಿಳಿಸಲಾ­ಗಿದೆ. ಆದರೆ ವಾಸ್ತವವಾಗಿ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ.

ಸಾವಿರಾರು ಮಂದಿ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂದೂ ಹೇಳಲಾಗಿದೆ. ರಾಜಧಾನಿ ಜುಬಾದಿಂದ ೨೦೦ ಕಿ.ಮೀ ದೂರದ­ಲ್ಲಿ­ರುವ ಬೊರ್‌ ಪಟ್ಟಣ ಸಧ್ಯ ಬಂಡುಕೋರರ ವಶದ­ಲ್ಲಿದ್ದು, ಪುನಃ ವಶಕ್ಕೆ ಪಡೆಯಲು ಸೇನಾ ಕಾರ್ಯಾಚರಣೆ ನಡೆಸಲಾಗು­ವುದು ಎಂದು ಸೇನೆ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT