ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ದಯವಿಟ್ಟು ಟಿಕೆಟ್ ನೀಡಿ'

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಇದು ಕ್ರಿಕೆಟ್ ಮೇಲಿನ ಪ್ರೀತಿಯೋ, ಅತಿಯಾದ ಅಭಿಮಾನವೋ ಎಂಬುದು ತಿಳಿಯದು. ಭಾರತ- ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಆಗಮಿಸಿರುವ ಪಾಕಿಸ್ತಾನದ ಅಭಿಮಾನಿಯೊಬ್ಬ `ದಯವಿಟ್ಟು ನನಗೊಂದು ಟಿಕೆಟ್ ನೀಡಿ' ಎಂಬ ಭಿತ್ತಿಪತ್ರ ಹಿಡಿದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸುತ್ತಾಡುತ್ತಿದ್ದದ್ದು ಸೋಮವಾರ ಎಲ್ಲರ ಗಮನ ಸೆಳೆಯಿತು.

ಮೊಹಮ್ಮದ್ ಬಶೀರ್ ಎಂಬ ಈ ಅಭಿಮಾನಿ ಪಂದ್ಯ ನೋಡಲಿಕ್ಕಾಗಿ ದೂರದ ಷಿಕಾಗೊದಿಂದ ಆಗಮಿಸಿದ್ದಾನೆ. `ಪಿಕಾಗೊದಿಂದ ಕರಾಚಿಗೆ ಆಗಮಿಸಿ, ಅಲ್ಲಿಂದ ನವದೆಹಲಿ ಮಾರ್ಗವಾಗಿ ಬೆಂಗಳೂರಿಗೆ ಬಂದಿದ್ದೇನೆ. ಆದರೆ ಪಂದ್ಯದ ಟಿಕೆಟ್ ಇಲ್ಲ. ದಯವಿಟ್ಟು ಒಂದು ಟಿಕೆಟ್ ನೀಡಿ' ಎಂದು ಎಲ್ಲರಲ್ಲೂ ಕೇಳುತ್ತಿದ್ದದ್ದು ಕಂಡುಬಂತು.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎರಡೂ ಟ್ವೆಂಟಿ-20 ಪಂದ್ಯಗಳಿಗೆ ಬಿಸಿಸಿಐನಿಂದ ಯಾವುದೇ ಟಿಕೆಟ್ ಕೇಳಿರಲಿಲ್ಲ. ಆದರೂ ಈ ಅಭಿಮಾನಿ ಬೆಂಗಳೂರಿಗೆ ಆಗಮಿಸಿದ್ದು ಅಚ್ಚರಿ ಉಂಟುಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT