ಸಮಯೋಚಿತ
ರಾಮನಗರ ಜಿಲ್ಲಾ ದರ್ಶನ (ಎಸ್.ಸಂಪತ್) ಲೇಖನ ಸಕಾಲಿಕ ಅನ್ನಿಸಿತು. ಈ ಪುಟ್ಟ ಜಿಲ್ಲೆ ಗ್ರಾನೈಟ್, ರೇಷ್ಮೆ, ಮಾವು ಹಾಗೂ ತರಕಾರಿ ಬೆಳೆಗಳಿಗೆ ಪ್ರಸಿದ್ಧಿಯಾಗಿದೆ. ಜಾನಪದ ಲೋಕ, ಚನ್ನಪಟ್ಟಣದ ಬೊಂಬೆಗಳು ಇತ್ಯಾದಿ ಕುರಿತ ಮಾಹಿತಿಗಳಿಂದ ಜಿಲ್ಲಾ ದರ್ಶನ ಇಷ್ಟವಾಯಿತು.
-ಸಹನಾ ಚಂದ್ರಶೇಖರ್, ಚಿಕ್ಕಮಗಳೂರು
ಸಂಸ್ಕತಿಗೆ ಒತ್ತು
ಇತ್ತೀಚಿನ ವರ್ಷಗಳಲ್ಲಿ ರಾಮನಗರ ಜಿಲ್ಲೆ ರಾಜಕೀಯ ವಿದ್ಯಮಾನಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಆದರೆ ಲೇಖನದಲ್ಲಿ ರಾಜಕೀಯ ಪ್ರಸ್ತಾಪಿಸದೇ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಇತಿಹಾಸದ ಮಾಹಿತಿಗಳಿಗೆ ಹೆಚ್ಚಿನ ಒತ್ತು ನೀಡಿದ ಲೇಖಕರ ಜಾಣ್ಮೆ ಇಷ್ಟವಾಯಿತು.
-ಅಶ್ವಿನಿ, ತುಮಕೂರು
ರೈತ ಮುಂದಾಳತ್ವ
ಸಾವಯವದಲ್ಲಿ ಈರುಳ್ಳಿ ಬೆಳೆಯುವ ಮೂಲಕ ಕೊಟ್ಟೂರಿನ ಇಕ್ರಾ ಬಳಗದ ರೈತರು ಮಾದರಿಯಾಗಿದ್ದಾರೆ. ಪ್ರತಿಯೊಂದಕ್ಕೂ ಸರ್ಕಾರದ ಕಡೆಗೆ ನೋಡದೆ ರೈತರೇ ಮುಂದಾಳತ್ವ ವಹಿಸಿ ಹೊಸ ಬೇಸಾಯ ಕ್ರಮಗಳನ್ನು ರೂಢಿಸಿಕೊಳ್ಳುವ ಪ್ರವೃತ್ತಿ ನಿಜಕ್ಕೂ ಮಾದರಿ.
-ನರಸಿಂಹಪ್ಪ ಬಳ್ಳಾರಿ
ಮಾರ್ಗದರ್ಶಿ
ಸಾವಯವ ಹಾಗೂ ಸಹಜ ಕೃಷಿ ಪ್ರಯೋಗಗಳಲ್ಲಿ ಯಶಸ್ವಿಯಾದ ರೈತರನ್ನು ಪರಿಚಯಿಸುವ ‘ಕೃಷಿ ಪುರವಣಿ’ಯ ಲೇಖನಗಳು ರೈತರಿಗೆ ಮಾರ್ಗದರ್ಶಿಯಾಗಿವೆ. ಜಾಗತೀಕರಣದ ನಂತರ ಕೃಷಿ ಕ್ಷೇತ್ರ ಬದಲಾಗಿದೆ. ರೈತರೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ.
-ಸುರೇಶ ಪಾಟೀಲ, ಸಂಕೇಶ್ವರ