ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಬಲ ಲೋಕಪಾಲ ಮಸೂದೆ: ಕೇಜ್ರಿವಾಲ್‌ ಅತೃಪ್ತಿ

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜ್ಯಸಭೆಯ ಪರಿಗಣನೆಯಲ್ಲಿರುವ ಲೋಕಪಾಲ ಮಸೂದೆ ದುರ್ಬಲ ಮತ್ತು ಪರಿಣಾಮಕಾರಿಯಲ್ಲ ಎಂದು ಹೇಳುವ ಮೂಲಕ ಆಮ್‌ ಆದ್ಮಿ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್‌ ಮಸೂದೆಯನ್ನು ತಿರಸ್ಕರಿಸಿದ್ದಾರೆ.

ಈ ಮಸೂದೆ ಅಂಗೀಕಾರದಿಂದ ಕಾಂಗ್ರೆಸ್‌ ಹೊರತುಪಡಿಸಿ ಬೇರೆ ಯಾರಿಗೂ ಲಾಭವಿಲ್ಲ. ಮಸೂದೆ ಅಂಗೀಕಾರವಾದರೆ ರಾಹುಲ್‌ ಗಾಂಧಿಗೆ ಅದರ ಕೀರ್ತಿ ದೊರೆಯುತ್ತದೆ ಅಷ್ಟೆ ಎಂದು  ಹೇಳಿದ್ದಾರೆ.

‘ಸಚಿವರ ವಿಷಯ ಬಿಡಿ, ಈ ಮಸೂದೆಯಿಂದ ಒಂದು ಇಲಿಯನ್ನು ಕೂಡ ಜೈಲಿಗೆ ಕಳುಹಿಸುವುದು ಸಾಧ್ಯವಿಲ್ಲ. ಮುಂದಿನ 10 ವರ್ಷಗಳಲ್ಲಿ ಒಬ್ಬನೇ ಒಬ್ಬ ವ್ಯಕ್ತಿಗೆ ಶಿಕ್ಷೆಯಾಗು­ವುದಿಲ್ಲ’ ಎಂದು ಕೇಜ್ರಿವಾಲ್‌ ಅಭಿಪ್ರಾಯಪಟ್ಟಿದ್ದಾರೆ.

ಸಿಬಿಐಯನ್ನು ಸ್ವಾಯತ್ತಗೊಳಿ­ಸುವವರೆಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಒಬ್ಬರಿಗೂ ಶಿಕ್ಷೆಯಾಗದು. ಈಗಿನ ಮಸೂದೆ ಸಿಬಿಐಯನ್ನು ಸ್ವಾಯತ್ತ
ಗೊಳಿ­ಸುವುದಿಲ್ಲ. ಕಳೆದ 50 ವರ್ಷಗಳಲ್ಲಿ ಸಿಬಿಐಯಿಂದ ನಾಲ್ಕು ರಾಜಕೀಯ ನಾಯಕರಿಗೆ ಮಾತ್ರ ಶಿಕ್ಷೆಯಾಗಿದೆ. ಯಾರ ವಿರುದ್ಧ ತನಿಖೆ ನಡೆಸಲಾಗು­ತ್ತದೆಯೋ ಅದೇ ರಾಜಕೀಯ ನಾಯಕರಿಗೆ ಸಿಬಿಐ ವರದಿ ಸಲ್ಲಿಸಬೇಕಿ­ರುವುದರಿಂದ ಹೀಗಾಗಿದೆ ಎಂದು ಕೇಜ್ರಿವಾಲ್‌ ವಿವರಿಸಿದ್ದಾರೆ.

2011ರ ಆಗಸ್ಟ್‌ 11ರಂದು ಅಂಗೀಕಾರವಾದ ಮಸೂದೆಯಲ್ಲಿ ಲೋಕಪಾಲಕ್ಕೆ ಸ್ವತಂತ್ರವಾದ ತನಿಖಾ ಸಂಸ್ಥೆಯನ್ನು ಹೊಂದುವ ಅವಕಾಶ ಇತ್ತು. ಆದರೆ ಈಗ ದುರ್ಬಲ­ವಾಗಿ­ರುವ ಲೋಕಪಾಲವನ್ನು ಒಪ್ಪಿಕೊಳ್ಳು­ವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಜನ ಲೋಕಪಾಲಕ್ಕಾಗಿ ನಮ್ಮ ಚಳವಳಿಯನ್ನು ಮುಂದುವರಿಸುತ್ತೇವೆ. ಹಿಂದೆ ಹಜಾರೆ ಅವರ ನಿರಶನ ನಿಲ್ಲಿಸು­ವುದಕ್ಕಾಗಿ ನೀಡಲಾದ ಮೂರು ಭರವಸೆಗಳನ್ನು ಉಳಿಸಿ­ಕೊಳ್ಳುವಲ್ಲಿ ಸಂಸತ್ತು ವಿಫಲವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.
ಒಂದು ಬಾರಿ ಕಾನೂನು ರಚನೆ­ಯಾದ ನಂತರ ಜನ ಲೋಕಪಾಲದ ಅಂಶಗಳನ್ನು ಮತ್ತೆ ಸೇರಿಸಿಕೊಳ್ಳ­ಬಹುದು ಎಂಬ ಸಲಹೆಯ ಬಗ್ಗೆ ಕೇಜ್ರಿ­ವಾಲ್‌ ಖಾರವಾದ ಪ್ರತಿಕ್ರಿಯೆ ನೀಡಿ­ದ್ದಾರೆ.

‘ಅವರು ಕಂತುಗಳಲ್ಲಿ ಭ್ರಷ್ಟಾ­ಚಾರ ಎಸಗುವುದಿಲ್ಲ. ಹಾಗಿರುವಾಗ ಕಾನೂನನ್ನು ಮಾತ್ರ ಯಾಕೆ ಕಂತು­ಗಳಲ್ಲಿ ರಚಿಸಬೇಕು’ ಎಂದು ಅವರು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT