ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಎಲ್.ಎಸ್. ಪೂಜಾರ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ಜನಪದ ಬದುಕಿನ ಮಹತ್ವ ಅರಿಯುವುದರೊಂದಿಗೆ, ಪರಂಪರೆಯ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದರು.
ಪರಂಪರೆ ಕೂಟದ ಸಂಚಾಲಕರಾದ ಉಪನ್ಯಾಸಕ ಎಸ್.ಪಿ.ಗೌಡರ ಆಶಯ ನುಡಿಗಳಲ್ಲಿ ಪರಂಪರೆ ಕೂಟದ ಚಟುವಟಿಕೆಗಳನ್ನು ವಿವರಿಸಿದರು.
ಉಪನ್ಯಾಸಕ ಆರ್.ಎಸ್ ಚಕ್ಕಿ, ಗಾಯಕ ಬಸವರಾಜ ಶಿಗ್ಗಾಂವ,ಉಪನ್ಯಾಸಕರಾದ ಎಸ್.ಬಿ.ಭಜಂತ್ರಿ, ದಿನೇಶ, ಡಾ.ಪರಮೇಶ್ವರ, ಎಸ್.ಬಿ.ಮಲ್ಲೂರ, ಕವಿತಾ ಹರಿಹರ, ಕೆ.ಆರ್.ಕೊಣ್ತಿ ಮತ್ತಿತರರು ಉಪಸ್ಥಿತರಿದ್ದರು. ಕು.ಅಶ್ವಿನಿ ಹಿರೇಮಠ ಸ್ವಾಗತಿಸಿದರು. ಉಪನ್ಯಾಸಕ ಎಸ್.ಎಚ್.ದೊಡ್ಡಗೌಡರ ವಂದಿಸಿದರು. ಪ್ರವೀಣ ಕುರುವತ್ತೇರ ನಿರೂಪಿಸಿದರು.ಸಚಿವರಾಗಿದ್ದ ವಿ.ಎಸ್.ಆಚಾರ್ಯ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.