ಜಿಲ್ಲೆಯ ಗಣಿಗಳಲ್ಲಿ ಹಾಗೂ ಅದಿರು ಸಾಗಣೆ ಲಾರಿಗಳು ಸಂಚರಿಸುವ ರಸ್ತೆಗಳಲ್ಲಿ ನಿತ್ಯವೂ ಬೆಳಿಗ್ಗೆಯಿಂದ ಸಂಜೆಯವರೆಗೆ ಆರು ಚಕ್ರದ ಲಾರಿಗಳಲ್ಲಿ ನೀರಿನ ಟ್ಯಾಂಕ್, ಅದರ ಕೆಳಗೊಂದು ಪೈಪ್ ಅಳವಡಿಸಿ, ಅದಕ್ಕೆ ರಂಧ್ರ ಮಾಡಿ ರಸ್ತೆಗೆಲ್ಲಾ ನೀರು ಚಿಮುಕಿಸುತ್ತಿದ್ದ ವಿಧಾನ ಜಾರಿಯಲ್ಲಿದೆ. ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತದೆ. ಆದರೂ ಗಾಳಿ ಮೂಲಕ ಹರಡುವ ದೂಳನ್ನು ನಿಯಂತ್ರಿಸಲು ಇದರಿಂದ ಸಾಧ್ಯವಾಗುವುದಿಲ್ಲ ಎಂಬುದನ್ನು ಮನಗಂಡಿರುವ ಸಂಡೂರಿನ ಬಿ.ಕುಮಾರಗೌಡ ಮೈನ್ಸ್ ಕಂಪೆನಿ ಹೈಟೆಕ್ ವಾಹನ ಖರೀದಿಸಿದೆ.