ಹಳೇಬೀಡು: `ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪ್ರಾಚೀನ ಕಾಲದ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವ ಅಗತ್ಯವಿದೆ' ಎಂದು ದೊಡ್ಡಕುರಬರಹಳ್ಳಿ ಮಠದ ಜಯಬಸವಾನಂದ ಸ್ವಾಮೀಜಿ ನುಡಿದರು.
ಹಳೇಬೀಡಿನ ಮುತ್ತಿನ ವೀರಭದ್ರಸ್ವಾಮಿ ದೇವಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶರಣ ಸಮ್ಮೇಳನ ಹಾಗೂ ಕಾರ್ತಿಕ ಮಾಸ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ ಪ್ರಭಾಕರ್, ಪ್ರಾಚಾರ್ಯ ಎಚ್.ಆರ್.ನಾಗರಾಜಪ್ಪ ಮಾತನಾಡಿದರು.
ಉಪನ್ಯಾಸಕ ಬೀಕನಹಳ್ಳಿ ಪ್ರವೀಣ್ ಕುಮಾರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚಕ್ಮನೆ ಚಂದ್ರಶೇಖರ್, ಬಿಜೆಪಿ ಮುಖಂಡ ಸೋಮಶೇಖರ್, ಹಿರಿಯ ಮುಖಂಡ ಚನ್ನದೇವಪ್ಪ ಇತರರು ಇದ್ದರು.