ಫೆ.17ರಂದು ದೇವರ ಪ್ರಾಣ ಪ್ರತಿಷ್ಠಾಪನೆ, ಅಗ್ನಿಮಥನ, ಚಂಡಿಕಾಯಾಗ , ಮಹಾಪೂಜೆ.18ರ ಬೆಳಿಗ್ಗೆ 8ಕ್ಕೆ ನವಗ್ರಹ ಸಹಿತ ವಿಶ್ರಾಂತಿ ಹೋಮ ನಡೆಯಲಿದೆ.
19ರಂದು ಬಾಲಗಂಗಾಧರನಾಥ ಸ್ವಾಮೀಜಿ, ತಿರುಸ್ವಾಮಿ, ಈಶ್ವರಾನಂದಸ್ವಾಮಿ ಸಮ್ಮುಖದಲ್ಲಿ ಕಳಸ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. 25 ಸಾವಿರ ಜನರಿಗೆ ಅನ್ನದಾನ ವ್ಯವಸ್ಥೆ ಇದೆ. ಗೃಹ ಸಚಿವ ಆರ್.ಅಶೋಕ್ ಸಮಾರಂಭಕ್ಕೆ ಚಾಲನೆ ನೀಡಲಿದ್ದು, ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಎಂ.ಶ್ರೆನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಸುರೇಶ್ಕುಮಾರ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಶಾಸಕರಾದ ಎಸ್.ಮುನಿರಾಜು, ವಿಶ್ವನಾಥ್ ಮೊದಲಾದವರು ಭಾಗವಹಿಸಲಿದ್ದಾರೆ.