ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಯಾನಿ ಪ್ರಕರಣ: ಮೆತ್ತಗಾದ ಭಾರತದ ನಿಲುವು

Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇವಯಾನಿ ಪ್ರಕರಣದಲ್ಲಿ  ಮೃದು ಧೋರಣೆ ತಳೆದಿರುವ ಭಾರತ, ‘ಉಭಯ ದೇಶಗಳ ನಡುವಣ ಸಂಬಂಧದ ವಿಭಿನ್ನ ಆಯಾಮ­ವನ್ನು ಗಮನದಲ್ಲಿಟ್ಟುಗೊಂಡು ಹೆಜ್ಜೆ ಇಡಬೇಕಾಗಿದೆ’ ಎಂದು ಶುಕ್ರವಾರ ಹೇಳಿದೆ.

ದೇವಯಾನಿ ವಿರುದ್ಧದ ಪ್ರಕರಣವನ್ನು ವಾಪಸ್‌ ಪಡೆಯು­ವುದಕ್ಕೆ  ಅಮೆರಿಕ ನಿರಾಕರಿಸುತ್ತಿದ್ದರೂ, ಈ ಪ್ರಕರಣ ಇತ್ಯರ್ಥ­ವಾಗುವ ಭರವಸೆಯನ್ನು ಕೇಂದ್ರ ಸರ್ಕಾರ ಕಳೆದುಕೊಂಡಿಲ್ಲ.

‘ಉಭಯ ದೇಶಗಳ ನಡುವಣ ಸಂಬಂಧ ಅಮೂಲ್ಯ­ವಾದುದು’ ಎಂದಿರುವ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್‌ ಖುರ್ಷಿದ್‌, ‘ಭಾರತವು ದೇವಯಾನಿ  ಪ್ರಕರಣ­ವನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ’ ಎಂದಿದ್ದಾರೆ.

ನಮ್ಮಂತೆಯೇ ನಡೆದುಕೊಳ್ಳಿ: ‘ನಾವು ಅಮೆರಿಕದ ರಾಜ­ತಾಂತ್ರಿಕರನ್ನು ಸಭ್ಯತೆಯಿಂದ ನಡೆಸಿಕೊಳ್ಳುತ್ತೇವೆ. ಅದೇ ರೀತಿ ಅಮೆರಿಕ ಕೂಡ ಭಾರತದ ರಾಜತಾಂತ್ರಿಕ­ರನ್ನು ಮರ್ಯಾದೆ­ಯಿಂದ ನಡೆಸಿಕೊಳ್ಳಬೇಕು’ ಎಂದು ವಿದೇಶಾಂಗ ಕಾರ್ಯ­ದರ್ಶಿ ಸುಜಾತಾ ಸಿಂಗ್‌ ಹೇಳಿದ್ದಾರೆ.

‘ಅಮೆರಿಕದ ಅಧಿಕಾರಿಗಳು ದೇವಯಾನಿ ಅವರನ್ನು ನಡೆಸಿಕೊಂಡಿರುವ ರೀತಿ ಸರಿಯಿಲ್ಲ’ ಎಂದು ಅವರು ಖಂಡಿಸಿದ್ದಾರೆ.

ಆದರ್ಶ ಹಗರಣದಲ್ಲಿ ದೇವಯಾನಿ ಹೆಸರು
ಮುಂಬೈ (ಪಿಟಿಐ): ಆದರ್ಶ ಹೌಸಿಂಗ್‌ ಸೊಸೈಟಿ ಹಗರಣದಲ್ಲಿ ದೇವಯಾನಿ ಖೋಬ್ರಾಗಡೆ ಹೆಸರೂ ಕೇಳಿಬಂದಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾದ ಆದರ್ಶ ಹಗರಣದ ತನಿಖಾ ವರದಿಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT