ಆದರೆ ಮೆಜೆಸ್ಟಿಕ್ ಬಳಿಯ ಲಕ್ಷ್ಮಣಪುರದಲ್ಲಿನ ಪಾತಾಳ ಆಂಜನೇಯ ಸ್ವಾಮಿಯ 30ನೇ ವರ್ಷದ ಮಹೋತ್ಸವವು `ಹನುಮ ಜಯಂತಿ'ಯ ದಿನ (ಮಂಗಳವಾರ) ಕಳೆಗಟ್ಟಿದ ರೀತಿ ಈ ವೇಷಧಾರಿಗಳಿಗಿಂತ ಭಿನ್ನವಾಗಿತ್ತು. ಹನುಮನ ವೇಷ ಧರಿಸಿ ಬಂದ ಅನೇಕರು ಅಲ್ಲಿ ಗದೆಗಳನ್ನು ಹಿಡಿದುಕೊಂಡು `ಚೇಷ್ಟೆ' ಮಾಡಿದರು. ಮರದಿಂದ ಒಬ್ಬರು ಜಿಗಿದರೆ, ಕಾಂಪೌಂಡ್ನಿಂದ ಮತ್ತೊಬ್ಬರು ನೆಗೆದರು. ಪ್ರಸಾದ ವಿನಿಯೋಗ ಮಾಡುವವರೂ ವೇಷಧಾರಿಗಳಾಗಿ ಗಮನ ಸೆಳೆದರು. ಅಷ್ಟೇ ಏಕೆ, ದ್ವಿಚಕ್ರ ವಾಹನದ ಮೇಲೆ ಅವರು ಓಡಾಡಿದಾಗ, ಅಕ್ಕಪಕ್ಕದವರ ಗಮನವೆಲ್ಲಾ ಅವರತ್ತಲೇ ಇತ್ತು.