ಬೆಂಗಳೂರು: ಜೀವ ಬೆದರಿಕೆಗೆ ಒಳಗಾಗಿರುವ ಟಿವಿಸಿಸಿ ಮುಖ್ಯ ಎಂಜಿನಿಯರ್ ಎನ್. ದೇವರಾಜು ಅವರಿಗೆ ರಕ್ಷಣೆ ನೀಡಲು ಪಾಲಿಕೆ ಬದ್ಧ ಎಂದು ಬಿಬಿಎಂಪಿ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಬುಧವಾರ ಭರವಸೆ ನೀಡಿದರು.
ಅಲ್ಲದೆ, ಟಿವಿಸಿಸಿ ಕಚೇರಿಯೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸಾಮಾನ್ಯ ಸಭೆಗೆ ತಿಳಿಸಿದರು.